ಈ ಅನುಮಾನಸ್ಪದ ವಸ್ತು ಇಂದು ನಿಲ್ದಾಣದಲ್ಲಿದ್ದ ಸಾರ್ವಜನಿಕರ ಕಣ್ಣಿಗೆ ಬಿದ್ದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುದಾಸ್ಪುರ ಜಿಲ್ಲಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆಯಲ್ಲಿ ತೊಡಗಿದ್ದಾರೆ. ಅಲ್ಲದೆ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ.
ಇನ್ನು ಪಾಕಿಸ್ತಾನದಿಂದ ದೇಶದ ಒಳಕ್ಕೆ ನುಸುಳಿದ್ದ ಮೂವರು ಉಗ್ರರು ಕಳೆದ ಮೂರುದಿನಗಳ ಹಿಂದಷ್ಟೇ ಇಲ್ಲಿನ ದೀನಾನಗರ್ ಪೊಲೀಸ್ ಠಾಣೆಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿ ಅಮಾನುಷವಾದಂತಹ ಕೃತ್ಯ ಎಸಗಿದ್ದರು. ಪರಿಣಾಮ ಓರ್ವ ಎಸ್ಪಿ ಸೇರಿದಂತೆ 7 ಮಂದಿ ಪೊಲೀಸರು ಹಾಗೂ ನಾಗರೀಕರು ಸೇರಿ ಒಟ್ಟು 13 ಮಂದಿ ಸಾವನ್ನಪ್ಪಿದ್ದರು. ಆದರೆ ಪ್ರತಿಯಾಗಿ ದಾಳಿ ನಡೆಸಿದ್ದ ದೇಶೀಯ ರಕ್ಷಣಾಪಡೆಯ ಯೋಧರು ಹಾಗೂ ಪಂಜಾಬ್ ಪೊಲೀಸರು, ಜಂಟಿ ಕಾರ್ಯಾಚರಣೆ ನಡೆಸಿ ಮೂವರೂ ಉಗ್ರರನ್ನು ಸದೆಬಡಿದಿದ್ದರು.