ಹೌದು, ಕುಡಿಯುವ ನೀರಿಗಾಗಿ ಪ್ರತಿಭಟಿಸಿದರು ಎಂಬ ಕಾರಣಕ್ಕೆ ಗ್ರಾಮದ ದಲಿತ ಸಮುದಾಯದವರನ್ನು ಕಳೆದ ಒಂದೂವರೆ ವರ್ಷಗದಿಂದಲೂ ಕೂಡ ನೀರಿಗೆ ಬರದಂತೆ ಬಹಿಷ್ಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಅಸ್ಪೃಶ್ಯತಾ ಆಚಱಣೆಯನ್ನು ನಿಲ್ಲಿಸುವಂತೆ ಹಾಗೂ ದಲಿತರಿಗೆ ಮತ್ತೊಮ್ಮೆ ನೀರಿಗಾಗಿ ಬಹಿಷ್ಕಾರ ಹಾಕದಂತೆ ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ದಾರೆ.