ಮಾಹಿತಿ ಹಕ್ಕು ಕಾರ್ಯಕರ್ತ ಸಿ.ಹೆಚ್. ಗೌರ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಕಾರ್ಯಕರ್ತ ಗೌರ್ ಅವರನ್ನು ಪ್ರಸ್ತುತ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನು ಮಾಧ್ಯಮಗಳೊಂದಿಗೆ ಕಾರ್ಯಕರ್ತ ಗೌರ್ ಮಾತನಾಡಿದ್ದು, ನಾಲ್ಕೈದು ಬೈಕ್ಗಳಲ್ಲಿ ಬಂದ ತಂಡವೊಂದು ನನ್ನ ಬೈಕ್ನ್ನು ಅಡ್ಡಗಟ್ಟಿ ಕೋಲಿನಿಂದ ಹಲ್ಲೆ ನಡೆಸಿದರು ಎಂದ ಅವರು, ನನ್ನ ಮೇಲೆ ಹಲ್ಲೆ ನಡೆಸಿರುವವರು ಕಾಂಗ್ರೆಸ್ ಪಕ್ಷದ ಹಾಲಿ ಸದಸ್ಯ ಪ್ರಕಾಶ್ ಕ್ಯಾರಕಟ್ಟಿ ಅವರ ಬೆಂಬಲಿಗರೇ ಎಂದು ದೂರಿದರು.