ಪರಮೇಶ್ವರ ನಾಯಕ್ ಬೆಂಗಾವಲು ವಾಹನ ಡಿಕ್ಕಿ : ಇಬ್ಬರ ಸಾವು

ಬುಧವಾರ, 3 ಫೆಬ್ರವರಿ 2016 (17:01 IST)
ಬಳ್ಳಾರಿ ಉಸ್ತುವಾರಿ ಸಚಿವ ಪರಮೇಶ್ವರ ನಾಯಕ್ ಕೂಡ್ಲಿಗಿ ಡಿವೈಎಸ್‌ಪಿ ಅನುಪಮ ಶೆಣೈ ಅವರನ್ನು ವರ್ಗಾವಣೆ ಮಾಡಿಸಿದ್ದೇನೆಂದು ಹೇಳಿಕೆ ನೀಡಿದ ಮೇಲೆ ಅನೇಕ ವಿವಾದಗಳಿಗೆ ಗುರಿಯಾದರು.

ಈಗ ಪರಮೇಶ್ವರ ನಾಯಕ್  ಅವರ ಬೆಂಗಾವಲು ವಾಹನ ಮತ್ತು ಖಾಸಗಿ ಬಸ್  ನಡುವೆ ಹರಪನಹಳ್ಳಿ ತಾಲೂಕು ಸಿಂಗಾರವ್ವನ ತೋಟದಲ್ಲಿ ಡಿಕ್ಕಿಯಾಗಿ ಬೆಂಗಾವಲು ವಾಹನದಲ್ಲಿದ್ದ ಎಎಸ್‌ಐ, ಪೇದೆ ಮೃತರಾಗಿದ್ದಾರೆ.  ಚಾಲಕ ನಾಗರಾಜ್ ಸಿಂಗ್ ಎಎಸ್‌ಐ ವೆಂಕಟೇಶುಲು  ಮೃತಪಟ್ಟಿದ್ದಾರೆ.

ಮೃತ ಎಎಸ್‌ಐ ಪೊಲೀಸ್ ಪೇದೆ ಬಳ್ಳಾರಿ ಮೂಲದವರಾಗಿದ್ದು, ಪರಮೇಶ್ವರ ನಾಯಕ್ ಉಚ್ಚಂಗಿದುರ್ಗಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ಎಸ್ಪಿ ಭೀಮಾಶಂಕರ್ ಗುಳೇದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಹರಪನಹಳ್ಳಿ ಆಸ್ಪತ್ರೆಗೆ ಗಾಯಗೊಂಡವರನ್ನು ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. 

ವೆಬ್ದುನಿಯಾವನ್ನು ಓದಿ