2015ರ ಮೇನ ಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕು ಹಂಪಸಾಗರ ಬಳಿ 24 ಎಕರೆ ಭೂಮಿಯನ್ನು ಪರಮೇಶ್ವರ ನಾಯ್ಕ್ ಖರೀದಿಸಿದ್ದರು. ಆದರೆ ಈ ಭೂಮಿಯನ್ನು ಅವರ ಹೆಸರಿನಲ್ಲಿ ಖರೀದಿಸದೇ ಮಂಜುಳಾ ಅವರ ಹೆಸರಿನಲ್ಲಿ ಖರೀದಿಸಿರುವುದು ವಿವಾದಕ್ಕೆ ಗುರಿಯಾಗಿದೆ. ಡಿವೈಎಸ್ಪಿ ಅನುಪಮಾ ಶೆಣೈ ವರ್ಗಾವಣೆ ರದ್ದಾಗಿ ಪುನಃ ಕೂಡ್ಲಿಗಿಯಲ್ಲಿ ನಿಯೋಜನೆಯಾದ ಮೇಲೆ ಪರಮೇಶ್ವರ್ ನಾಯ್ಕ್ ವಿರುದ್ದ ಒಂದರ ಹಿಂದೊಂದು ಆರೋಪಗಳು ಕೇಳಿಬರುತ್ತಿದೆ.