ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹಲವು ಜನರ ನಡುವೆ ಪೈಪೋಟಿ ಇತ್ತು. ಆದರೆ ಖರ್ಗೆ ಬೆಂಬಲಿತ ಸದಸ್ಯರನ್ನು ಆಯ್ಕೆ ಮಾಡಲಾಯಿತು ಎಂಬ ಆರೋಪ ಕೇಳಿ ಬಂದಿದ್ದು ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ಚಿಂಚನಸೂರ್ ಅವರ ಕಾರ್ ಮೇಲೆ ಕುರ್ಚಿ, ಕಲ್ಲೆಸೆದರು. ಕೆಲವು ಕಾರ್ ಬೆನ್ನು ಹತ್ತಿ ಗಲಾಟೆ ನಡೆಸಿದರು. ಶಾಸಕ ಮಾಲಕರೆಡ್ಡಿ ಅವರ ಕಾರ್ಗೂ ಮುತ್ತಿಗೆ ಹಾಕಲಾಯಿತು.