ಸಚಿವ ಚಿಂಚನಸೂರ್ ಮೇಲೆ ಹಲ್ಲೆ ಯತ್ನ

ಮಂಗಳವಾರ, 3 ಮೇ 2016 (15:54 IST)
ಜವಳಿ ಸಚಿವ ಬಾಬುರಾಮ್ ಚಿಂಚನಸೂರ್ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ. ಯಾದಗಿರಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಘಟನೆ ಇಂದು ಮಧ್ಯಾಹ್ನ ಘಟನೆ ನಡೆದಿದೆ.

ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ವಿಚಾರಕ್ಕೆ ಇಂದು ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸಭೆ ಸೇರಲಾಗಿತ್ತು. ಸಭೆಯಲ್ಲಿ ಸಚಿವರು, ಶಾಸಕರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು. 
 
ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹಲವು ಜನರ ನಡುವೆ ಪೈಪೋಟಿ ಇತ್ತು. ಆದರೆ ಖರ್ಗೆ ಬೆಂಬಲಿತ ಸದಸ್ಯರನ್ನು ಆಯ್ಕೆ ಮಾಡಲಾಯಿತು ಎಂಬ ಆರೋಪ ಕೇಳಿ ಬಂದಿದ್ದು ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ಚಿಂಚನಸೂರ್ ಅವರ ಕಾರ್ ಮೇಲೆ ಕುರ್ಚಿ, ಕಲ್ಲೆಸೆದರು. ಕೆಲವು ಕಾರ್‌ ಬೆನ್ನು ಹತ್ತಿ ಗಲಾಟೆ ನಡೆಸಿದರು. ಶಾಸಕ ಮಾಲಕರೆಡ್ಡಿ ಅವರ ಕಾರ್‌ಗೂ ಮುತ್ತಿಗೆ ಹಾಕಲಾಯಿತು. 
 
ಕಚೇರಿಯಲ್ಲಿದ್ದ  ಪ್ಲಾಸ್ಟಿಕ್ ಕುರ್ಚಿಗಳು ಚೆಲ್ಲಾಪಿಲ್ಲಿಯಾಗಿದ್ದು ಬಿಗಿ ಭದ್ರತೆಯ ನಡುವೆ ಸಚಿವರನ್ನು ಸ್ಥಳದಿಂದ ಸಾಗಿಸಲಾಯಿತು. 

ವೆಬ್ದುನಿಯಾವನ್ನು ಓದಿ