ಜೋಡಿ ಕೊಲೆ ಭೇದಿಸಿದ ಪೊಲೀಸರು: ಅಪ್ರಾಪ್ತ ವಯಸ್ಕ ಬಾಲಕನ ಬಂಧನ

ಮಂಗಳವಾರ, 22 ಏಪ್ರಿಲ್ 2014 (11:36 IST)
ಬೆಂಗಳೂರು: ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಜೋಡಿಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.  ಅಪ್ರಾಪ್ತವಯಸ್ಕ ಬಾಲಕರಾದ ವೇಣು, ಪವನ್ ಎಂಬವರ ಕೊಲೆ ನಡೆದಿತ್ತು. ಬಲವಾದ ಆಯುಧದಿಂದ ಅವರಿಬ್ಬರ ತಲೆಗೆ ಹೊಡೆದು ಕೊಲೆ ಮಾಡಲಾಗಿತ್ತು. ಈ ಕುರಿತಂತೆ ತನಿಖೆ ನಡೆಸಿದ ಪೊಲೀಸರು ಆರೋಪಿ ಆನಂದ್ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ಮೃತರು ಆನಂದ್ ಜೊತೆ ಇದ್ದಿದ್ದು ತಿಳಿದುಬಂದ ಬಳಿಕ ಪೊಲೀಸರು ಆನಂದ್‌ನನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಜೋಡಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.  

ಆನಂದ್ ಕ್ಷುಲ್ಲಕ ಕಾರಣಕ್ಕೆ ಜೋಡಿ ಕೊಲೆ ಮಾಡಿದ್ದ. ಕೊಲೆ ಮಾಡಿದವನು ಕೂಡ ಅಪ್ರಾಪ್ತ ವಯಸ್ಕನಾಗಿದ್ದಾನೆ. ವೇಣು, ಪವನ್ ಅವರ ಶವಗಳು ಜಮೀನೊಂದರ ಷೆಡ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.  ವೇಣು (17) ಹಾಗೂ ಪವನ್ (16) ಜಿನ್ನಸಂದ್ರದ ಗೋಪಾಲ್ ಮತ್ತು ಭರತಮ್ಮ ದಂಪತಿಯ ಪುತ್ರರು.  ಮೊಬೈಲ್ ಕಳ್ಳತನ ಸೇರಿದಂತೆ ಸಣ್ಣಪುಟ್ಟ ಪ್ರಕರಣಗಳಲ್ಲಿ ವೇಣು ಹಾಗೂ ಪವನ್ ಭಾಗಿಯಾಗಿದ್ದರು ಎನ್ನಲಾಗಿದೆ.

ಚಿಕ್ಕನಾಯಕನಹಳ್ಳಿಯ ಗೋಪಾಲರೆಡ್ಡಿ ಎಂಬುವರ ತೋಟದ ಶೆಡ್‌ನಲ್ಲಿ ಸಹೋದರರ ಶವಗಳು ಕೊಳೆತ ಸ್ಥಿತಿಯಲ್ಲಿ ಶನಿವಾರ ಸಂಜೆ ಪತ್ತೆಯಾಗಿತ್ತು. ಕೊಳೆತ ಶವಗಳ ವಾಸನೆ  ಗಮನಿಸಿ ಸಾರ್ವಜನಿಕರು ಎಚ್‌ಎಸ್‌ಆರ್ ಲೇಔಟ್ ಠಾಣೆಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.ನಾಲ್ಕು ದಿನಗಳ ಹಿಂದೆಯೇ ಕೊಲೆಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದರು. 

ವೆಬ್ದುನಿಯಾವನ್ನು ಓದಿ