ಬೆಂಗಳೂರಿನ ಆರ್.ಟಿ. ನಗರ ಪೊಲೀಸರು ಪುತ್ರ ಕಾರ್ತಿಕ್ ಗೌಡರನ್ನು ವಿಚಾರಣೆಗೆ ಹಾಜರುಪಡಿಸುವಂತೆ ಕೇಂದ್ರ ರೈಲ್ವೆ ಸಚಿವ ಸದಾನಂದ ಗೌಡರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಸದಾನಂದ ಗೌಡ ಪುತ್ರ ಕಾರ್ತಿಕ್ ಗೌಡ ವಿರುದ್ಧ ಮೈತ್ರಿಯಾ ವಂಚನೆ ಮತ್ತು ಅತ್ಯಾಚಾರದ ದೂರನ್ನು ನೀಡಿದ ಬಳಿಕ ಪೊಲೀಸರು ಮೈತ್ರಿಯಾ ವಿಚಾರಣೆ ನಡೆಸಿದರು ಮತ್ತು ವೈದ್ಯಕೀಯ ಪರೀಕ್ಷೆಗೆ ಅವರನ್ನು ಒಳಪಡಿಸಿದ್ದರು.