10 ವರ್ಷದ ಅಪ್ರಾಪ್ತ ಬಾಲಕಿಯನ್ನು ಚಾಕಲೇಟು ಕೊಡುವ ನೆಪದಲ್ಲಿ ವಸತಿ ಗೃಹಕ್ಕೆ ಕರೆದೊಯ್ದ ಚಿಕ್ಕಬಳ್ಳಾಪುರ ನಗರ ಸಂಚಾರಿ ಪೊಲೀಸ್ ಠಾಣೆ ಮುಖ್ಯ ಪೇದೆ ಮಂಜುನಾಥ್ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಹೆದರಿದ ಬಾಲಕಿ ಕಿರುಚಿಕೊಂಡಾಗ ಆಕೆಯ ಕೈಗೆ 500 ರೂಪಾಯಿ ಹಣ ಕೊಟ್ಟು ಯಾರಿಗೂ ಹೇಳಬೇಡ ಎಂದು ಹೇಳಿ ಕಳುಹಿಸಿದ್ದಾನೆ.