ಪದ್ಮನಾಭನಗರದ ಚಿಕ್ಕಲ್ಲಸಂದ್ರ ಕೆರೆಗೆ ಸಂಬಂಧಿಸಿದಂತೆ ಒತ್ತುವರಿಯಾದ ಜಾಗವನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮಾಡಲಾಗಿದೆ. ಸುಮಾರು 12 ಎಕರೆ 40 ಗುಂಟೆ ಜಾಗ ಒತ್ತುವರಿಯಾಗಿದ್ದು, ಬೆಂಗಳೂರು ನಗರ ಡಿಸಿ ಶಂಕರ್ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು. 12 ಎಕರೆಯಲ್ಲಿ ಕಟ್ಟಿದ್ದ ಮನೆಗಳು ಮತ್ತು ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು.
ಒತ್ತುವರಿ ತೆರವಿಗೆ ಜನರು ಪ್ರತಿಭಟನೆ ವ್ಯಕ್ತಪಡಿಸಿದ್ದರೂ, ಪೊಲೀಸರು ಬಲಪ್ರಯೋಗದಿಂದ ಒತ್ತುವರಿ ತೆರವು ಮಾಡಿದರು. ಒತ್ತುವರಿ ತೆರವು ಮಾಡದಂತೆ ಕೆಲವರು ಕೋರ್ಟ್ ಪತ್ರಗಳನ್ನು ತೋರಿಸಿದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ತೆರವು ಮಾಡಿಸಲಾಯಿತು.