ಭ್ರಷ್ಟಾಚಾರದ ಮೊಟ್ಟೆಯಿಟ್ಟು ಕಾಂಗ್ರೆಸ್ ಕಾವು ಕೊಟ್ಟಿದೆ: ಜೋಷಿ ವಾಗ್ದಾಳಿ

ಮಂಗಳವಾರ, 24 ನವೆಂಬರ್ 2015 (17:52 IST)
ಉಪಲೋಕಾಯುಕ್ತ ಸುಭಾಷ್ ಬಿ ಆಡಿ ವಜಾಕ್ಕೆ ಸಹಿ ಸಂಗ್ರಹ ಮಾಡಿರುವ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ಮುಖಂಡ ಪ್ರಹ್ಲಾದ್ ಜೋಷಿ ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದರು. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಜನಕ. ಭ್ರಷ್ಟಾಚಾರದ ಮೊಟ್ಟೆ ಇಟ್ಟು ಕಾಂಗ್ರೆಸ್ ಕಾವು ಕೊಟ್ಟಿದೆ. ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಹಾಳು ಮಾಡುವ ದುರ್ಬುದ್ಧಿ ಕಾಂಗ್ರೆಸ್‌ಗಿದೆ.  ರಾಜ್ಯ ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರಿಗಳನ್ನು ರಕ್ಷಿಸಿದೆ ಎಂದು ವಾಗ್ದಾಳಿ ಮಾಡಿದರು.

 ಲೋಕಾಯುಕ್ತರ ವಿರುದ್ಧ ಆರೋಪ ಜಗಜ್ಜಾಹೀರಾಗಿದ್ದರೂ ಅವರ ಪದಚ್ಯುತಿಗೆ ಒಕ್ಕೊರಲ ಬೇಡಿಕೆ ಮಂಡಿಸಿದ್ದರೂ ಸರ್ಕಾರ ಅವರನ್ನು ರಕ್ಷಿಸುವ ಯತ್ನ ಮಾಡುತ್ತಿದೆ. ಅಂತಹ ದುರ್ಬುದ್ಧಿ ಕಾಂಗ್ರೆಸ್ ಡಿಎನ್ಎನಲ್ಲಿದೆ ಎಂದು ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಷಿ ಟೀಕಿಸಿದರು.  

ಲೋಕಾಯುಕ್ತ ಸಂಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರವನ್ನು ಕಾಂಗ್ರೆಸ್ ಮಾಡುತ್ತಿದೆ. ಲೋಕಾಯುಕ್ತರಿಲ್ಲದೇ ಕಾಂಗ್ರೆಸ್ ಸರ್ಕಾರವನ್ನು ನಡೆಸಲು ಹೊರಟಿದೆ ಎಂದು ಜೋಷಿ ಕಿಡಿಕಾರಿದರು. 

ವೆಬ್ದುನಿಯಾವನ್ನು ಓದಿ