ಒಂದು ಸೋಲಿಗೆ ಆಳಿಗೊಂದರಂತೆ ಕಲ್ಲು ಹೊಡೆಯಬೇಡಿ; ಪ್ರತಾಪ್ ಸಿಂಹ ಮನವಿ

ಗುರುವಾರ, 13 ಏಪ್ರಿಲ್ 2017 (17:55 IST)
ಉಪಚುನಾವಣೆಯೊಂದರ ಸೋಲಿನ ಫಲಿತಾಂಶಕ್ಕಾಗಿ ಆಳಿಗೊಂದರಂತೆ ಕಲ್ಲು ಹೊಡೆಯಬೇಡಿ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.
 
ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಉಪಚುನಾವಣೆ ಫಲಿತಾಂಶ ಕುರಿತಂತೆ ವ್ಯಾಪಕವಾಗಿ ಟೀಕೆಗಳು ಪೋಸ್ಟ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ.
 
ನಮ್ಮ ಮೇಲೆ ವಿಶ್ವಾಸವಿಡಿ. ನಾವು ಸೋತಾಗ ಆತ್ಮವಿಶ್ವಾಸ ತುಂಬಿ. ಉಪಚುನಾವಣೆಯಲ್ಲಿ ನಾವು ಸೋತಿರಬಹುದು. ಆದರೆ.ದೇಶಾದ್ಯಂತ ಬಿಜೆಪಿ ನೆಲಕಚ್ಚಿದ ಸಂದರ್ಭದಲ್ಲಿ ರಾಜ್ಯದಲ್ಲಿ 19 ಸಂಸದರನ್ನು ಗೆಲ್ಲಿಸಿರುವುದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎನ್ನುವುದನ್ನು ಮರೆಯುವಂತಿಲ್ಲ ಎಂದು ತಿಳಿಸಿದ್ದಾರೆ.
 
ನಾವು ಸೋಲಿಗೆ ಹೆದರುವುದಿಲ್ಲ. ಸೋಲಿನಿಂದ ಪಾಠ ಕಲಿಯುತ್ತೇವೆ. ಮುಂದಿನ ವರ್ಷದ ಇದೇ ಏಪ್ರಿಲ್ ತಿಂಗಳಲ್ಲಿ ಫೇಸ್‌ಬುಕ್‌ ಗೋಡೆಯ ಮೇಲೆ ಆಶೀರ್ವಾದ, ಅಭಿನಂದನೆಗಳು ತುಂಬಿರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ