ಅಗ್ನಿ ಕುಂಡ ಹಾಯುವಾಗ ಆಯತಪ್ಪಿ ಕುಂಡಕ್ಕೆ ಬಿದ್ದ ಪೂಜಾರಿ

ಶನಿವಾರ, 18 ಫೆಬ್ರವರಿ 2017 (19:14 IST)
ಅಗ್ನಿ ಕುಂಡ ಹಾಯುವಾಗ ಪೂಜಾರಿ ಆಯತಪ್ಪಿ ಕೆಂಡದ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಬಳಿಯ ಸೋಮನಹಳ್ಳಿಯಲ್ಲಿ ನಡೆದಿದೆ.


ಸೌಮ್ಯಕೇಶ್ವರ್ ದೇವರನ್ನ ಹೊತ್ತು ಅಗ್ನಿ ಕುಂಡ ಹಾಯುತ್ತಿದ್ದ ಪೂಜಾರಿ ಮಂಜುನಾಥ್ ಎಂಬುವವರು ಆಯ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಪೂಜಾರಿಯನ್ನ ರಕ್ಷಿಸಿ ಆಂಬ್ಯುಲೆನ್ಸ್`ನಲ್ಲಿ ನಾಗಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ