ಕೊಡಗಿನಲ್ಲಿ ಗುಂಡಿಕ್ಕಿ ಬಸ್ ಚಾಲಕನ ಬರ್ಬರ ಹತ್ಯೆ

ಗುರುವಾರ, 14 ಏಪ್ರಿಲ್ 2016 (13:56 IST)
ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು ನಡು ರಸ್ತೆಯಲ್ಲಿಯೇ ಖಾಸಗಿ ಬಸ್ ಚಾಲಕನನ್ನು ಗುಂಡಿಟ್ಟು ಹತ್ಯೆಮಾಡಿರುವ ಘಟನೆ ಮಡಿಕೇರಿ ತಾಲೂಕಿ ಅರವತ್ತೊಕ್ಲು ಗ್ರಾಮದಲ್ಲಿ ನಿನ್ನೆ ರಾತ್ರಿ 7 ಗಂಟೆಗೆ ನಡೆದಿದೆ.
 
ಹತ್ಯೆಯಾದವನನ್ನು ಖಾಸಗಿ ಬಸ್ ಚಾಲಕ ರಾಜು(42) ಎಂದು ಗುರುತಿಸಲಾಗಿದ್ದು ನಿನ್ನೆ ರಾತ್ರಿ ಬಸ್‌ನ್ನು ಮಾಲೀಕರ ಮನೆ ಮುಂದೆ ಬಿಟ್ಟು ತನ್ನ ಮನೆಗೆ ಹೊರಟಿದ್ದಾಗ ಅಪರಿಚಿತರು ಆತನನ್ನು ಗುಂಡಿಟ್ಟು ಹತ್ಯೆಮಾಡಿದ್ದಾರೆ. 
 
ಆ ಸಮಯದಲ್ಲಿ ಬಸ್ ಕ್ಲೀನರ್ ರವಿ ಅಲ್ಲೇ ಸಮೀಪ ಬಸ್ ತೊಳೆಯುತ್ತಿದ್ದ. ಗುಂಡಿನ ಸದ್ದು ಕೇಳಿ ಆತ ಓಡಿ ಬಂದಾಗ ಚಾಲಕ ರಾಜು ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಆತ ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
 
ಪ್ರತ್ಯಕ್ಷದರ್ಶಿ ರವಿ ನೀಡಿರುವ ಮಾಹಿತಿಯ ಪ್ರಕಾರ ಗಿರೀಶ್ ಎಂಬ ವ್ಯಕ್ತಿ ಗುಂಡಿನದಾಳಿ ನಡೆಸಿದ್ದಾನೆ.
 
ಘಟನೆಗೆ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ