ಆಸ್ತಿ ವಿವಾದ: ಅಣ್ಣನ ಮಗನ ಮೇಲೆ ಗುಂಡು ಹಾರಿಸಿದ ಚಿಕ್ಕಪ್ಪ

ಶನಿವಾರ, 25 ಅಕ್ಟೋಬರ್ 2014 (15:09 IST)
ಆಸ್ತಿಗಾಗಿ ಸ್ವಂತ ಅಣ್ಣನ ಮಗನ ಮೇಲೆ ಚಿಕ್ಕಪ್ಪ ಫೈರಿಂಗ್ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗ್ರಾಮದಲ್ಲಿ ಸಂಭವಿಸಿದೆ.  ಶಿವನಗೌಡ ಊರಿಗೆ ಬಂದಿದ್ದ ಸಂದರ್ಭದಲ್ಲಿ ಚಿಕ್ಕಪ್ಪ ಕರಿಬಸವನಗೌಡ ಪಾಟೀಲ್  3 ಸುತ್ತು ಹಾರಿಸಿದ ಗುಂಡಿಗೆ ಗಾಯಾಳು ಎಎಸ್‌ಐ ಶಿವನಗೌಡ ಪಾಟೀಲ್ ಸ್ಥಿತಿ ಗಂಭೀರವಾಗಿದ್ದು, ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದು ಎಕರೆ 18 ಗುಂಟೆ ಜಮೀನಿಗಾಗಿ ನಡೆದ ವಾದವಿವಾದ ಹಿಂಸಾತ್ಮಕ ತಿರುವು ಪಡೆಯಿತು. ಶಿವನಗೌಡ ಪುಣೆ ಠಾಣೆಯಲ್ಲಿ ಎಎಸ್‌ಐ ಆಗಿದ್ದರು. 1. 18 ಎಕರೆ ಜಮೀನನ್ನು ತನಗೆ ಬಿಟ್ಟುಕೊಡುವಂತೆ ಕರಿಬಸವನ ಗೌಡ ಒತ್ತಾಯಿಸಿದ್ದ.

ಆದರೆ ಅದಕ್ಕೆ ಶಿವನಗೌಡ ನಕಾರ ಸೂಚಿಸಿದ್ದರಿಂದ ಕೆರಳಿದ ಚಿಕ್ಕಪ್ಪ ಬಂದೂಕಿನಿಂದ ಗುಂಡು ಹಾರಿಸಿದ್ದ. ನೇಸರ್ಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ