ಗೋವಾದಲ್ಲಿ ಕನ್ನಡಿಗರಿಗೆ ರಕ್ಷಣೆ ಕೊಡಿ: ಪರಿಕ್ಕರ್`ಗೆ ಪರಮೇಶ್ವರ್ ಆಗ್ರಹ

ಬುಧವಾರ, 5 ಏಪ್ರಿಲ್ 2017 (11:29 IST)
ಗೋವಾದಲ್ಲಿರುವ ಕನ್ನಡಿಗರ ರಕ್ಷಣೆಗೆ ಗೋವಾ ಸಿಎಂ ಮನೋಹರ್ ಪಿಕ್ಕರ್ ಕ್ರಮ ಕೈಗೊಳ್ಳಬೇಕೆಂದು ಗೃಹ ಸಚಿವ ಪರಮೇಶ್ವರ್ ಒತ್ತಾಯಿಸಿದ್ದಾರೆ. ಗೋವಾಕ್ಕೆ ಕನ್ನಡಿಗರ ಪ್ರವೇಶ ನಿರ್ಬಂಧಿಸಬೇಕೆಂಬ ಗೋವಾ ಸಚಿವರೊಬ್ಬರ ಹೇಳಿಕೆ ಬಗ್ಗೆ ಪರಮೇಶ್ವರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿರುವ ಪರಮೇಶ್ವರ್, ನಾವು ಒಕ್ಕೂಟ ವ್ವವಸ್ಥೆಯಲ್ಲಿದ್ದೇವೆ. ಲಂಬಾಣಿಗಳು ಕೂಲಿ ಕೆಲಸಕ್ಕೆ ಗೋವಾಗೆ ತೆರಳಿದ್ದಾರೆ.  ಪದೇ ಪದೇ ಅವರ ಮೇಲಿನ ಹಲ್ಲೆ ಸರಿಯಲ್ಲ ಎಂದು ಪರಮೇಶ್ವರ್ ಕಿಡಿ ಕಾರಿದ್ದಾರೆ.

ನಾನು ಕೂಡ ಗೋವಾಗೆ ತೆರಳಿ ಪರಿಶೀಲಿಸಿ ಬಂದಿದ್ದೇನೆ. ಗೋವಾ ಸರ್ಕಾರ ಕೂಡಲೇ ಕನ್ನಡಿಗರ ರಕ್ಷಣೆಗೆ ಮುಂದಾಗಬೇಕೆಂದು ಗೃಹ ಸಚಿವ ಪರಮೆಶ್ವರ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ