ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಲೀಕ್ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಲಾಗಿದ್ದು ಪ್ರಕರಣದ ಪ್ರಮುಖ ಆರೋಪಿ ಎಂದು ಭಾವಿಸಲಾಗಿರುವ ನಿವೃತ್ತ ಉಪನ್ಯಾಸಕ ಶಿವಕುಮಾರ್ ಸ್ವಾಮಿ ಕೇರಳಕ್ಕೆ ಪರಾರಿಯಾಗಿದ್ದಾನೆಂದು ಅನುಮಾನ ವ್ಯಕ್ತವಾಗಿದೆ. ಸಿಐಡಿ ಪೊಲೀಸರು ಫೋನ್ ಕರೆ ಪರಿಶೀಲನೆ ಮಾಡಿದಾಗ ಈ ಮಾಹಿತಿ ಸಿಕ್ಕಿದ್ದು ಪೊಲೀಸರ ಎರಡು ತಂಡ ಕೇರಳಕ್ಕೆ ದೌಡಾಯಿಸಿದೆ.
ಟಿಇಟಿ, ಪಿಯುಸಿ, ಎಸ್ಎಸ್ಎಲ್ಸಿ ಸೇರಿದಂತೆ ಹಲವು ಕೆಪಿಎಸ್ಸಿ ಪರೀಕ್ಷೆಗಳ ಪೇಪರ್ ಲೀಕ್ ಮಾಡಿದ್ದ ಆರೋಪ ಶಿವಕುಮಾರ್ ಮೇಲಿದೆ. ಈ ಹಿಂದೆ ಈತನ ಬಂಧನ ಕೂಡ ಆಗಿತ್ತು. ಇದಲ್ಲದೇ ರಾಜಕಾರಣಿಯೊಬ್ಬರು ಸಹ ಪಿಯು ಪ್ರಶ್ನೆ ಪತ್ರಿಕೆಯನ್ನು ಖರೀದಿಸಿದ್ದರು ಎಂಬ ಸ್ಪೋಟಕ ಮಾಹಿತಿ ಸಿಐಡಿ ಮೂಲಗಳಿಂದ ಕೇಳಿಬರುತ್ತಿದೆ.