ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಮಂಗಳೂರಿನಲ್ಲಿ ಶಾಂತಿ ಕದಡಲಾಗುತ್ತಿದೆ. ಈ ಕುರಿತು ಪತ್ರಿಕೆಯನ್ನು ಓದಿ ಮನಸ್ಸಿಗೆ ತುಂಬಾ ಬೇಜಾರಾಗಿದೆ. ಎಲ್ಲೆಡೆಯೂ ಹಿಂಸಾಚಾರ ಎಸಗುವ ಜನರಿರುತ್ತಾರೆ. ಆದರೆ, ಇಲ್ಲಿಯ ಕೆಲವು ಒಳ್ಳೆಯ ಜನರ ಪ್ರೀತಿಯನ್ನು ಗೌರವಿಸುತ್ತೇನೆ. ನನ್ನನ್ನು ಮಂಗಳೂರಿಗೆ ಸ್ವಾಗತಿಸಿರುವ ಜನರಿಗೆ ನಾನು ಚಿರಋಣಿ ಎಂದು ಹೇಳಿದರು.
ನಾನು ಚುನಾವಣಾ ಅಜೆಂಡಾ ಇಟ್ಟುಕೊಂಡು ಮಾತನಾಡುತ್ತಿಲ್ಲ. ಯಾಕೆಂದರೆ, ಜನರು ಘಟನೆಗಳನ್ನು ಬೇಗ ಮರೆತು ಹೋಗುತ್ತಾರೆ ಎಂದು ಹೇಳಿದರು. ಮಂಗಳೂರಿನ ಗೋಲಿಬಜೆ, ಪಬ್ಬಾಸ್ ಐಸ್ಕ್ರೀಂ ಅಂದ್ರೆ ನನಗಿಷ್ಟ ಎಂದು ಹೇಳಿದರು.