ಪ್ರಕರಣದ ಹಿನ್ನೆಲೆ: ಇಂದು ಬೆಳಗ್ಗೆ ಇಲ್ಲಿನ ನಿವಾಸಿಯೋರ್ವರು ಶೌಚಾಲಯಕ್ಕೆಂದು ತೋಪಿಗೆ ತೆರಳಿದ್ದರು. ಈ ವೇಳೆ ಮೃತ ಮಹಿಳೆಯ ದೇಹ ಕಂಡು ಬಂದಿದೆ. ಬಳಿಕ ಪ್ರಕರಣ ಸಂಬಂಧ ಅವರೇ ಖುದ್ದು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಬಳಿಕ, ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ಇತರೆ ಉನ್ನತ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.