ಇಂದಿನ ಕಲಾಪಕ್ಕೆ ಕೇವಲ 30 ರಿಂದ 40 ಮಂದಿ ಜನಪ್ರತಿನಿಧಿಗಳು ಮಾತ್ರ ಭಾಗವಹಿಸಿದ್ದರು. ಉಳಿದ ಎಲ್ಲಾ ಸ್ಥಾನಗಳು ಖಾಲಿ ಉಳಿದಿದ್ದವು. ಇದನ್ನು ಕಂಡ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಸದಸ್ಯರ ವರ್ತನೆ ವಿರುದ್ಧ ಗರಂ ಆಗಿದ್ದು, ಸ್ವಲ್ಪವಾದರೂ ಗಂಭೀರತೆ ಇಲ್ಲ ಎಂದರೆ ಸರ್ಕಾರ ನಡೆಸಲು ಹೇಗೆ ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಆಸ್ಟ್ರೇಲಿಯಾ ತಂಡ, 7 ವಿಕೆಟ್ ನಷ್ಟಕ್ಕೆ 328 ರನ್ ಕಲೆ ಹಾಕಿದೆ. ಈ ಹಿನ್ನೆಲೆಯಲ್ಲಿ ಎದುರಾಳಿಯಾಗಿರುವ ಭಾರತ ತಂಡವು 329 ರನ್ಗಳ ಗುರಿಯನ್ನು ಬೆನ್ನಟ್ಟಬೇಕಿದೆ. ಈ ರೋಚಕ ಆಟವನ್ನು ವೀಕ್ಷಿಸಲು ರಾಜ್ಯದ ಜನಪ್ರತಿನಿಧಿಗಳೂ ಕೂಡ ಉತ್ಸಾಹ ತೋರಿದ್ದು, ಸದನದ ಕಲಾಪಕ್ಕೆ ಗೈರಾಗಿದ್ದಾರೆ.