ಕೊಟ್ಟ ದೇವರು ಕಸಿದುಕೊಂಡಾಗಲೂ ಅವರಿವರಿಂದ ದೇಣಿಗೆ ಪಡೆದು ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಉಮೇಶ್ ಎನ್ನುವವರು ಶಿವಮೊಗ್ಗದಿಂದ ಅಕ್ಕಿ ತಂದಿದ್ದಾರೆ. ನಮ್ಮ ಸ್ನೇಹಿತರು ಹೆದರಬೇಡಿ ನಾವಿದ್ದೇವೆ ಎಂದು ದೇಣಿಗೆ ಕೊಟ್ಟು, ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಶ್ರೀರಾಮುಲು ತನ್ನ ಆರ್ಥಿಕ ಪರಿಸ್ಥಿತಿಯನ್ನು ಹೇಳಿಕೊಂಡರು.