ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಳ್ಳಾರಿ ಸಂಸದ

ಭಾನುವಾರ, 28 ಸೆಪ್ಟಂಬರ್ 2014 (10:35 IST)
ತಃ ಬಿ.ಶ್ರೀರಾಮುಲು ತಾವು ಆರ್ಥಿಕ ಸಂಕಷ್ಟದಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ಈ ಮಾತನ್ನು ಅವರು ಹೇಳಿದ್ದು ನಗರದ ಕೋಟೆ ಮಲ್ಲೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ 15ನೇ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ.
 
ಕೊಟ್ಟ ದೇವರು ಕಸಿದುಕೊಂಡಾಗಲೂ ಅವರಿವರಿಂದ ದೇಣಿಗೆ ಪಡೆದು ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಉಮೇಶ್ ಎನ್ನುವವರು ಶಿವಮೊಗ್ಗದಿಂದ ಅಕ್ಕಿ ತಂದಿದ್ದಾರೆ. ನಮ್ಮ ಸ್ನೇಹಿತರು ಹೆದರಬೇಡಿ ನಾವಿದ್ದೇವೆ ಎಂದು ದೇಣಿಗೆ ಕೊಟ್ಟು, ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಶ್ರೀರಾಮುಲು ತನ್ನ ಆರ್ಥಿಕ ಪರಿಸ್ಥಿತಿಯನ್ನು ಹೇಳಿಕೊಂಡರು.
 
15 ವರ್ಷದಿಂದ ಬಡವರಿಗಾಗಿ ಸಾಮೂಹಿಕ ವಿವಾಹ ಏರ್ಪಡಿಸುತ್ತಿದ್ದೇನೆ. ಇದರಲ್ಲಿ ಸ್ವಾರ್ಥವಿಲ್ಲ ಎಂದು ಹೇಳಿಕೊಂಡರು.

ವೆಬ್ದುನಿಯಾವನ್ನು ಓದಿ