ಐಎಎಸ್ ಅಧಿಕಾರಿ ಪುತ್ರಿ ಮೇಲೆ ಅತ್ಯಾಚಾರ?

ಶುಕ್ರವಾರ, 17 ಏಪ್ರಿಲ್ 2015 (10:12 IST)
ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಮಗಳ ಮೇಲೆ ಅತ್ಯಾಚಾರ ನಡೆದ ಪ್ರಕರಣ ಮೈಸೂರಿನಲ್ಲಿ ವರದಿಯಾಗಿದೆ.
ತಮ್ಮ ಮಗಳ ಮೇಲೆ ಆಕೆಯ ಪತಿಯ ಸಹೋದರ ಮೈಸೂರಿನ ಅವರ ಮನೆಯಲ್ಲಿ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯ ಉಸಿರುಗಟ್ಟಿಸಿ ಕೊಲ್ಲಲು ಸಹ ಯತ್ನಿಸಲಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಪೀಡಿತೆ ಪ್ರೀತಿಸಿ ಮದುವೆಯಾಗಿದ್ದಳು. 
 
ಬೆಂಗಳೂರು ಪೂರ್ವ ವಲಯ ಡಿಸಿಪಿ ಸತೀಶ್  ಅವರಿಗೆ ದೂರು ಸಲ್ಲಿಕೆಯಾಗಿದ್ದು ಪ್ರಕರಣ ಮೈಸೂರಿನಲ್ಲಿ ನಡೆದಿದುದರಿಂದ ಸತೀಶ್ ಅವರಿದನ್ನು ಮೈಸೂರಿಗೆ ವರ್ಗಾಯಿಸಿದ್ದಾರೆ.
 
ಅತ್ಯಾಚಾರವಷ್ಟೇ ಅಲ್ಲದೇ ಮಗಳ ಪತಿ, ಮೈದುನ, ಅತ್ತೆ, ಮಾವ ವರದಕ್ಷಿಣೆ ಕಿರುಕುಳವನ್ನು ಸಹ ನೀಡಿದ್ದಾರೆ. ಮದುವೆಯಾದ ಬಳಿಕ ತಮಗೆ ವ್ಮೈಯವಹಾರದಲ್ಲಿ ನಷ್ಟವಾಗುತ್ತಿದೆ ಎಂದು ಹೀಯಾಳಿಸುತ್ತಿದ್ದ  ಅಳಿಯನ ಮನೆಯವರು ತನ್ನ ಮಗಳಿಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು ಎಂದು ಎಂದು  ನಿವೃತ್ತ ಅಧಿಕಾರಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.  ಮೈಸೂರಿನ ಪ್ರಸಿದ್ಧ ಉದ್ಯಮಿಗಳ ವಿರುದ್ಧ ಈ ದೂರು ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ