ದರೋಡೆ, ಕೊಲೆ, ಹಲ್ಲೆಯನ್ನೇ ಕಸುಬನ್ನಾಗಿಸಿಕೊಂಡಿದ್ದ ಕಾಲಿಯಾ ರಫಿಕ್ ಅಂತಾರಾಜ್ಯ ಮಟ್ಟದ ಕ್ರಿಮಿನಲ್ ಆಗಿದ್ದನು. ಉಪ್ಪಳವನ್ನೇ ತನ್ನ ಅಡ್ಡೆಯನ್ನಾಗಿಸಕೊಂಡು ಮೆರೆದಾಡುತ್ತಿದ್ದ. ಕೇರಳ ಹಾಗೂ ಕರ್ನಾಟಕದ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಸಾಕಷ್ಟು ದೂರುಗಳು ದಾಖಲಾಗಿವೆ.
ಹಲವಾರು ವರ್ಷಗಳಿಂದ ಈತ ಜೈಲಿನಲ್ಲಿದ್ದು, ಕೆಲ ತಿಂಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದನು. ಮೂರು ದಿನಗಳ ಹಿಂದೆ ಉಪ್ಪಳದ ವೈದ್ಯರೊಬ್ಬರಿಗೆ ಹಫ್ತಾಕ್ಕಾಗಿ ಬೇಡಿಕೆಯನ್ನಿಟ್ಟಿದ್ದ ಎನ್ನಲಾಗಿದೆ. ಈತನ ವಿರೋಧಿಗಳಾದ ಉಪ್ಪಳದ ಕ್ರಿಮಿನಲ್ ಗಳ ಗುಂಪು ಕೊಲೆ ನಡೆಸಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.