ರೌಡಿ ಶೀಟರ್ ರವಿಯ ಬರ್ಬರ ಹತ್ಯೆ: ದೂರು ದಾಖಲು

ಬುಧವಾರ, 17 ಡಿಸೆಂಬರ್ 2014 (11:04 IST)
ರೌಡಿ ಶೇಟರ್ ಓರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಗರದ ಯಶವಂತಪುರ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. 
 
ಹತ್ಯೆಗೊಳಗಾದ ರೌಡಿ ಶೀಟರ್‌ನನ್ನು ರವಿ(24) ಎಂದು ಹೇಳಲಾಗಿದ್ದು, ಎದೆ ಹಾಗೂ ಬೆನ್ನೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. 
 
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಈತನ ವಿರುದ್ಧ ನಗರದ ಹಲವು ಠಾಣೆಗಳಲ್ಲಿ ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕ್ರಿಮಿನಲ್ ದೂರುಗಳು ದಾಖಲಾಗಿದ್ದವು. ಅಲ್ಲದೆ ಈತನ ಬದ್ಧ ವೈರಿಯಾಗಿದ್ದ ಪಳನಿ ಹತ್ಯೆಯಲ್ಲಿ ಈತನ ಕೈವಾಡವಿದೆ ಎಂಬ ಕಾರಣದಿಂದ ಈತನನ್ನು ಹತ್ಯೆಗೈದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ