ಆದರೆ, ಜನೆವರಿ ನಂತರ ರಾಜಕಾರಣಿಗಳು, ಉದ್ಯಮಿಗಳು, ಕಪ್ಪು ಹಣ ಹೊಂದಿದವರ ಹಳೆಯ ನೋಟು ಬದಲಾವಣೆಗೆ ಶೇ.50 ರಷ್ಟು ಕಮಿಶನ್ ಪಡೆಯತ್ತಿರುವುದಾಗಿ ಮಾಹಿತಿ ನೀಡಿದ್ದಾನೆ. ಕೆಲವು ಬಾರಿ ಹಳೆಯ ನೋಟು ಬದಲಾವಣೆ ಬಂದವರನ್ನು ದರೋಡೆ ಮಾಡಿರುವ ಬಗ್ಗೆಯೂ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಒಟ್ಟು 50 ರಿಂದ 60 ಕೋಟಿ ರೂಪಾಯಿ ಸಂಗ್ರಹಿಸಿ ಗಾಂಧಿನಗರ ಕ್ಷೇತ್ರದಿಂದ ಶಾಸಕನಾಗಲೇಬೇಕು ಎನ್ನುವ ಮಹತ್ಕಾಂಕ್ಷೆಯನ್ನು ಹೊಂದಿದ್ದನು. ಅದಕ್ಕಾಗಿ ಸಿದ್ದತೆ ಕೂಡಾ ನಡೆಸಿದ್ದ ಎನ್ನಲಾಗಿದೆ. ಆತನ ಕೃತ್ಯಕ್ಕೆ ಇಬ್ಬರು ಪುತ್ರರಾದ ಗಾಂಧಿ ಮತ್ತು ಶಾಸ್ತ್ರಿ ಹಾಗೂ ಪತ್ನಿ ಲಕ್ಷ್ಮಿ ಕೂಡಾ ಸಾಥ್ ನೀಡಿದ್ದರು ಎಂದು ರೌಡಿಶೀಟರ್ ನಾಗ ತಿಳಿಸಿದ್ದಾನೆ,