ರೌಡಿಶೀಟರ್‌ ಸುನೀಲ್ ಬರ್ಬರ ಹತ್ಯೆ: ಸ್ಪಾಟ್ ನಾಗನ ಕೈವಾಡ ಶಂಕೆ

ಬುಧವಾರ, 8 ಮಾರ್ಚ್ 2017 (18:52 IST)
ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ರೌಡಿಗಳ ಅಟ್ಟಹಾಸ, ಅಬ್ಬರ ಆತಂಕ ಮೂಡಿಸಿದೆ. ಇಂದು ಹಾಡಹಗಲೇ ರೌಡಿಶೀಟರ್‌ನನ್ನು ಆತನ ವಿರೋಧಿಗಳು ಮಚ್ಚುಗಳಿಂದ ಕೊಚ್ಚಿ ಬೀಕರವಾಗಿ ಕೊಲೆ ಮಾಡಿರುವುದು ದಿಗ್ರಾಂತಿ ಮೂಡಿಸಿದೆ.
 
ಕಮಲನಗರದ ಚಂದ್ರಪ್ಪ ರಸ್ತೆಯಲ್ಲಿರುವ ರೌಡಿಶೀಟರ್‌ ಸುನೀಲ್‌ನನ್ನು ಆತನ ವಿರೋಧಿ ಗ್ಯಾಂಗ್ ಹತ್ಯೆ ಮಾಡಿ ಪರಾರಿಯಾಗಿದೆ.
 
ಪೋಷಕರ ಸಮ್ಮುಖದಲ್ಲಿಯೇ ಪುತ್ರನ ಹತ್ಯೆಗೈದಿರುವುದು ನೋಡಿದಲ್ಲಿ ರೌಡಿಗಳಿಗೆ ಯಾವುದೇ ಭಯ ಭೀತಿಯಿಲ್ಲ ಎನ್ನುವುದು ಸಾಬೀತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
 
28 ವರ್ಷ ವಯಸ್ಸಿನ ಸುನೀಲ್ ಹತ್ಯೆಯ ನಂತರ ಬಡಾವಣೆಯಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿದ್ದು, ಪೊಲೀಸರು ಭಾರಿ ಬಂದೋಬಸ್ತ್ ಏರ್ಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಸುನೀಲ್ ಹತ್ಯೆಯಾದ ದೃಶ್ಯವನ್ನು ಕೆಲವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ, ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದ ವಿಡಿಯೋ ಪಡೆದುಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ