ಸಚಿವ ಟಿ.ಬಿ.ಜಯಚಂದ್ರ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜನೆಯಾಗಿದ್ದ ಲಾರಿ-ಟ್ರ್ಯಾಕ್ಟರ್ ಮಾಲೀಕರ ಜತೆಗಿನ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಸತ್ಯಮೂರ್ತಿ ತಮ್ಮ ಹತ್ಯೆ ಯತ್ನದ ಕುರಿತ ಸತ್ಯವನ್ನು ಹೊರಹಾಕಿದ್ದಾರೆ. ಮಧುಗಿರಿಯಿಂದ ತುಮಕೂರಿಗೆ ಮರಳು ಸಾಗಿಸುತ್ತಿದ್ದ ಲಾರಿಯನ್ನು ತಡೆಯಲು ಹೋದಾಗ ನಾನು ಕುಳಿತಿದ್ದ ಕಾರಿಗೆ ಲಾರಿಯನ್ನು ಗುದ್ದಿ ಸಾಯಿಸುವ ಪ್ರಯತ್ನ ನಡೆಯಿತು. ಆದರೆ ಅದೃಷ್ಟವಶಾತ್ ನಾನು ಪ್ರಾಣಾಪಾಯದಿಂದ ಪಾರಾದೆ ಎಂದು ಸತ್ಯಮೂರ್ತಿಯವರು ಹೇಳಿದ್ದಾರೆ.