ಕಳಸಾ ಬಂಡೂರಿ ಯೋಜನೆ ಜಾರಿಗೆ ಮತ್ತೆ ಸ್ಯಾಂಡಲ್‌ವುಡ್ ಪ್ರತಿಭಟನೆ

ಶುಕ್ರವಾರ, 20 ನವೆಂಬರ್ 2015 (13:40 IST)
ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸುತ್ತಿರುವ ರೈತರ ಪ್ರತಿಭಟನೆಗೆ ಸ್ಯಾಂಡಲ್‌ವುಡ್ ಮತ್ತೊಮ್ಮೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದೆ. ಆನಂದರಾವ್ ಸರ್ಕಲ್ ಬಳಿ ಧರಣಿ ಸೇರಿದ ಚಲನಚಿತ್ರ ಕಲಾವಿದರು ಗೋವಾ ಚಿತ್ರೋತ್ಸವಕ್ಕೆ ಬಹಿಷ್ಕಾರ ಹಾಕಲು ಕರೆ ನೀಡಿದರು.

ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶಿವರಾಜ್ ಕುಮಾರ್, ಸಾ.ರಾ. ಗೋವಿಂದು ಸೇರಿ ಹಲವಾರು ಕಲಾವಿದರು ಭಾಗಿಯಾಗಿದ್ದರು.  ನಟ ಶಿವರಾಜ್ ಕುಮಾರ್ ಮಾತನಾಡುತ್ತಾ   ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಯಾವ ರೀತಿ ಹೋರಾಟ ಮಾಡಲೂ ನಾವು ಸಿದ್ದರಿದ್ದೇವೆ. ಸರ್ಕಾರ ಮತ್ತು ಸಂಸದರು ಈ ಯೋಜನೆ ಜಾರಿಗೆ ಸೂಕ್ತವಾಗಿ ಸ್ಪಂದಿಸಬೇಕು. ಆದರೆ ತಮ್ಮ ಸೀಟುಗಳನ್ನು ಭದ್ರ ಮಾಡಲು ಬೇರೆ ಸಮಸ್ಯೆಗಳನ್ನು ಹೈಲೈಟ್ ಮಾಡಿ ಈ ಸಮಸ್ಯೆಯನ್ನು ಕಡೆಗಣಿಸುವುದು ಸರಿಯಲ್ಲ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ