ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶಿವರಾಜ್ ಕುಮಾರ್, ಸಾ.ರಾ. ಗೋವಿಂದು ಸೇರಿ ಹಲವಾರು ಕಲಾವಿದರು ಭಾಗಿಯಾಗಿದ್ದರು. ನಟ ಶಿವರಾಜ್ ಕುಮಾರ್ ಮಾತನಾಡುತ್ತಾ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಯಾವ ರೀತಿ ಹೋರಾಟ ಮಾಡಲೂ ನಾವು ಸಿದ್ದರಿದ್ದೇವೆ. ಸರ್ಕಾರ ಮತ್ತು ಸಂಸದರು ಈ ಯೋಜನೆ ಜಾರಿಗೆ ಸೂಕ್ತವಾಗಿ ಸ್ಪಂದಿಸಬೇಕು. ಆದರೆ ತಮ್ಮ ಸೀಟುಗಳನ್ನು ಭದ್ರ ಮಾಡಲು ಬೇರೆ ಸಮಸ್ಯೆಗಳನ್ನು ಹೈಲೈಟ್ ಮಾಡಿ ಈ ಸಮಸ್ಯೆಯನ್ನು ಕಡೆಗಣಿಸುವುದು ಸರಿಯಲ್ಲ ಎಂದು ಹೇಳಿದರು.