ಸತ್ತ ಮಗನ ಶವವನ್ನು ಈ ಬಡ ಅಪ್ಪ ಸಾಗಿಸಿದ ಪರಿ ಹೇಗೆ ಗೊತ್ತಾ?

ಮಂಗಳವಾರ, 2 ಮೇ 2017 (08:10 IST)
ಆನೇಕಲ್: ಬಡತನ ಮತ್ತು ತಿಳುವಳಿಕೆಯ ಕೊರತೆಯಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ವ್ಯಕ್ತಿಯೊಬ್ಬ ತನ್ನ ಮಗನ ಶವವನ್ನು ಸಾಗಿಸಿದ ಪರಿ ಕರುಣಾಜನಕವಾಗಿದೆ.

 
ಎಲ್ಲರೂ ಮೃತದೇಹವನ್ನು ಆಂಬ್ಯುಲೆನ್ಸ್ ನಲ್ಲಿಕೊಂಡೊಯ್ದರೆ ಈತ ದ್ವಿಚಕ್ರ ವಾಹನದಲ್ಲಿ ಸಾಗಿಸಿದ್ದಾನೆ. ಇವರ ಕರುಣಾಜನಕ ಕತೆಗೆ ಕೊನೆಗೂ ಪೊಲೀಸರ ಕಣ್ತೆರೆಸಿದೆ.

ಸಫಾನ್ ರಾಯ್ ಎಂಬಾತ ಮೂಲತಃ ಒಡಿಶಾ ನಿವಾಸಿ. ಕೆಲಸಕ್ಕಾಗಿ ಕರ್ನಾಟಕಕ್ಕೆ ವಲಸೆ ಬಂದಿದ್ದ. ಈತನ ಮೂರು ವರ್ಷದ ಪುತ್ರ  ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಆನೇಕಲ್ ಆಸ್ಪತ್ರೆಗೆ ದಾಖಲಾಗಿದ್ದ.

ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಆದರೆ ಮೃತದೇಹವನ್ನು ಸಾಗಿಸಲು ಉಚಿತ ಆಂಬ್ಯುಲೆನ್ಸ್ ಸೇವೆ ಇದೆ ಎಂಬ ಮಾಹಿತಿ ಸಫಾನ್ ಗಿರಲಿಲ್ಲ. ಭಾಷೆ ಬರದ ಕಾರಣ ಆತನಿಗೆ ಸಂವಹನ ಸಮಸ್ಯೆಯಾಗಿತ್ತು.

ಆಸ್ಪತ್ರೆಯವರೂ ಮಾಹಿತಿ ನೀಡದೇ ಇದ್ದುದರಿಂದ ದ್ವಿಚಕ್ರ ವಾಹನದಲ್ಲೇ ಮಗನ ಶವ ಸಾಗಿಸಿದರು. ಇದನ್ನು ಕೆಲವು ಸ್ಥಳೀಯ ಚಾನೆಲ್ ಗಳು ಪ್ರಸಾರ ಮಾಡಿದ್ದವು. ಇದರಿಂದ ಪೊಲೀಸರಿಗೆ ಮಾಹಿತಿ ದೊರೆತು ಪ್ರಕರಣ ದಾಖಲಿಸಿದರಲ್ಲದೆ, ದೇಹವನ್ನು ಮರಳಿ ಆಸ್ಪತ್ರೆಗೆ ಕರೆತಂದು ಪೋಸ್ಟ್ ಮಾರ್ಟಂ ಮಾಡಿಸಿದರು. ನಂತರ ಆಂಬ್ಯುಲೆನ್ಸ್ ನಲ್ಲೇ ಮೃತದೇಹ ಸಾಗಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ