ಬಂಗಾರಪ್ಪ ಕೊನೆಯಾಸೆ ಏನಾಗಿತ್ತಂತೆ ಗೊತ್ತಾ?

ಮಂಗಳವಾರ, 21 ಫೆಬ್ರವರಿ 2017 (08:43 IST)
ಎಚ್‌.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆಂಬುದು ನಮ್ಮ ತಂದೆಯ ಕೊನೆಯಾಸೆಯಾಗಿತ್ತು ಎಂದು ಮಾಜಿ ಸಿಎಂ ಬಂಗಾರಪ್ಪ ಕಿರಿಯ ಪುತ್ರ, ಜೆಡಿಎಸ್ ನಾಯಕ ಮಧು ಬಂಗಾರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡುತ್ತಿದ್ದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ , ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆಂಬುದನ್ನು ನೋಡಬೇಕೆಂಬ ಬಯಕೆ ತಮ್ಮ ತಂದೆಗಿತ್ತು ಎಂದರು.
 
ತಮ್ಮ ಸಹೋದರ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿರುವ ಸುದ್ದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಕುಮಾರ್ ಪ್ರಾದೇಶಿಕ ಪಕ್ಷಕ್ಕೆ ಸೇರುವಷ್ಟು ಸಣ್ಣವರಲ್ಲ ಎಂದು ವ್ಯಂಗ್ಯವಾಡಿದರು.
 
ಮುಂದುವರೆದ ಅವರು ಕೇಂದ್ರ ಮತ್ತು ರಾಜ್ಯಸರ್ಕಾರಗಳು ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿವೆ.ನೋಟು ರದ್ಧತಿಯ ಮೂಲಕ ಮೋದಿ ಸರ್ಕಾರ ಜನರನ್ನು ಸಂಕಷ್ಟಕ್ಕೆ ದೂಡಿದರೆ ರಾಜ್ಯ ಸರ್ಕಾರ ರೈತವಿರೋಧಿಯಾಗಿದೆ ಎಂದು ಕಿಡಿಕಾರಿದ ಅವರು ಜೆಡಿಎಸ್ ಕೇವಲ ಮುಸ್ಲಿಂ ನಾಯಕರನ್ನಲ್ಲ ಎಲ್ಲ ನಾಯಕರನ್ನು ಬೆಳೆಸಿದೆ ಎಂದಿದ್ದಾರೆ.
 

ವೆಬ್ದುನಿಯಾವನ್ನು ಓದಿ