ಮತದಾನ ಮಾಡಿದ ನಂತರ ತಮ್ಮ ಸ್ನೇಹಿತ ಕೆಂಪೀರಯ್ಯ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯನವರಿಗೆ ಭೂರಿ ಭೋಜನ ಕಾದಿತ್ತು. ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ಮೊಟ್ಟೆಯನ್ನು ಗಡದ್ದಾಗಿ ಸೇವಿಸಿದ ಸಿಎಂ, ಕೆಲ ಹೊತ್ತು ಮನೆಯ ಆವರಣದಲ್ಲಿ ಗ್ರಾಮಸ್ಥರೊಂದಿಗೆ ಕುಶಲೋಪರಿ ವಿಚಾರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಮಕ್ಕೆ ಆಗಮಿಸಿದ ಸುದ್ದಿ ತಿಳಿದ ಗ್ರಾಮಸ್ಥರು, ನಾ ಮುಂದು ತಾ ಮುಂದು ಎನ್ನುವಂತೆ ಅವರಿದ್ದಲ್ಲಿಗೆ ಧಾವಿಸಿ ಸೆಲ್ಫಿ ತೆಗೆಸಿಕೊಂಡರು ಸಂಪೂರ್ಣ ರಿಲೀಫ್ ಆಗಿರುವಂತೆ ಕಂಡು ಬಂದ ಸಿಎಂ ಕೆಲ ಕಾಲ ಗ್ರಾಮಸ್ಥರೊಂದಿಗೆ ಹರಟೆ ಹೊಡೆದರು.