ತ್ರಿದೇವ್ (22) ಎಂಬ ಯುವಕನೇ ಈ ದುಷ್ಕೃತ್ಯವನ್ನು ಎಸೆದ ಆರೋಪಿಯಾಗಿದ್ದು, ಆತ ಎಚ್ಎಎಲ್ ಸಮೀಪದ ಕಾಡುಬೀಸನಹಳ್ಳಿಯಲ್ಲಿರುವ ಪ್ರತಿಷ್ಠಿತ ಅಪಾರ್ಟ್ಮೆಂಟ್ ಒಂದರಲ್ಲಿ ಕಾವಲುಗಾರನಾಗಿ ಕಳೆದೊಂದು ವರ್ಷದಿಂದ ಕೆಲಸ ಮಾಡುತ್ತಿದ್ದಾನೆ. ಆತನಿಂದ ಶೋಷಣೆಗೊಳಗಾದ ಬಾಲಕರ ಪಾಲಕರು ನೀಡಿರುವ ದೂರಿನ ಮೇರೆಗೆ ಆತನನ್ನು ಬಂಧಿಸಲಾಗಿದೆ.
ಕಳೆದ ಮಾರ್ಚ್ 7 ರಂದು ಆಟವಾಡುತ್ತಿದ್ದ ಮೂವರು ಬಾಲಕರ ಸಮೀಪಕ್ಕೆ ಬಂದ ಈತ ಅವರಿಗೆ ಅಶ್ಲೀಲ ಭಾವಚಿತ್ರಗಳನ್ನು ತೋರಿಸಿ, ಅಸಭ್ಯ ವರ್ತನೆ ತೋರಲು ಪ್ರಾರಂಭಿಸಿದ್ದ. ಇದರಿಂದ ಭಯಗೊಂಡ ಬಾಲಕರು ಮನೆಗೆ ಓಡಿ ಹೋಗಿ ತಂದೆ- ತಾಯಿಗಳಿಗೆ ನಡೆದ ವಿಷಯವನ್ನು ತಿಳಿಸಿದ್ದಾರೆ.