ಚಪ್ಪಲಿ ಸೇವೆ ಮಾಡಿದ ಶಿವಸೇನೆ ಸಂಸದನ ಟಿಕೆಟ್ ಕ್ಯಾನ್ಸಲ್

ಮಂಗಳವಾರ, 28 ಮಾರ್ಚ್ 2017 (20:23 IST)
ಏರ್‌ಇಂಡಿಯಾ ಉದ್ಯೋಗಿಗೆ ಚಪ್ಪಲಿ ಸೇವೆ ಮಾಡಿದ ಶಿವಸೇನೆ ಸಂಸದನಿಗೆ ವಿಮಾನಯಾನ ಇನ್ನೂ ಗಗನಕುಸುಮವಾಗಿದೆ. ಇಂದು ಮತ್ತೆ ಏರಿಂಡಿಯಾ ಸಂಸ್ಥೆ ಸಂಸದನ ಟಿಕೆಟ್ ರದ್ದುಗೊಳಿಸಿದೆ
 
ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿದ್ದರು. ಆದರೆ, ಅವರ ಹೆಸರು ಕಪ್ಪು ಪಟ್ಟಿಯಲ್ಲಿರುವುದರಿಂದ ಏರಿಂಡಿಯಾ ಸಂಸ್ಥೆ ವಿಮಾನದ ಟಿಕೆಟ್ ರದ್ದುಗೊಳಿಸಿದೆ. ಮತ್ತೊಂದು ಬಾರಿ ಹೈದ್ರಾಬಾದ್‌ಗೆ ತೆರಳಲು ಮಾಡಿದ ಟಿಕೆಟ್ ಕೂಡಾ ರದ್ದುಗೊಳಿಸಿದೆ. 
 
 ಆನ್ ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲೂ ಗಾಯಕ್ವಾಡ್ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದ್ದು, ಅವರ ಹೆಸರು  ನಮೂದಾಗುತ್ತಿದ್ದಂತೆಯೇ ಟಿಕೆಟ್ ರದ್ದಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
 
ಏರಿಂಡಿಯಾ ಹಿರಿಯ ಸಿಬ್ಬಂದಿಗೆ ಗಾಯಕ್ವಾಡ್ ಚಪ್ಪಲಿ ಸೇವೆ ಮಾಡಿರುವುದು ವಿಮಾನಯಾನ ಸಂಸ್ಥೆಗಳಲ್ಲಿ ಆಕ್ರೋಶ ಮೂಡಿಸಿದೆ. ಗಾಯಕ್ವಾಡ್‌‌ಗೆ ಯಾವುದೇ ವಿಮಾನಯಾನ ಸಂಸ್ಥೆಗಳಲ್ಲಿ ಟಿಕೆಟ್ ನೀಡದಂತೆ ಫೆಡರೇಶನ್ ಆಫ್ ಏರ್‌ಲೈನ್ಸ್ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ