ಇನ್ನು ಥಳಿಸಿದ ಪೊಲೀಸ್ ಅಧಿಕಾರಿಯನ್ನು ನಗರದ ಸದಾಶಿವನಗರ ವಿಭಾಗದ ಸಂಚಾರಿ ಪೊಲೀಸ್ ಠಾಣೆಯ ಎಸ್ಐ ರಂಗಪ್ಪ ಎನ್ನಲಾಗಿದ್ದು, ರಸ್ತೆಯಲ್ಲಿ ವಾಹನಗಳ ತಡೆಗಾಗಿ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಅಂಬುಲನ್ಸ್ವೊಂದನ್ನು ಅಪ್ಪಣೆ ಇಲ್ಲದೆ ಹೊರ ಬಿಟ್ಟರು ಎಂಬ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನಬಂದಂತೆ ಥಳಿಸಿದ್ದಾರೆ. ಅಲ್ಲದೆ ಅವರ ಸೈಕಲ್ಲನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಥಳಿಸಿಕೊಂಡ ಸಾರ್ವಜನಿಕ ವ್ಯಕ್ತಿಯು ಮಾಜಿ ಸೈನಿಕರಾಗಿದ್ದು, ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಅಂಬುಲನ್ಸ್ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ನಲ್ಲಿ ಬಂಧಿಯಾಗಿತ್ತು. ಆದರೆ ಅದು ಸೇವೆಗೆ ತೆರಳಿದರೆ ಹಲವರಿಗೆ ಉಪಯೋಗವಾಗಲಿದೆ. ಈ ಮೂಲಕ ಹಲವರ ಜೀವದಾನವಾಗಬಹುದು ಎಂಬ ಕಾರಣದಿಂದ ನಾನು ಹಗ್ಗವನ್ನು ಬಿಚ್ಚಿದೆ. ಇದಕ್ಕೆ ಟ್ರಾಫಿಕ್ನಲ್ಲಿದ್ದ ಇತರೆ ಖಾಸಗಿ ವಾಹನ ಸವಾರರೂ ಕೂಡ ಸಹಕರಿಸಿದರು. ಆದರೆ ಕರ್ತವ್ಯ ಪ್ರಜ್ಞೆಯನ್ನು ಮರೆತ ಎಸ್ಐ, ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.