ಪ್ರಕರಣದ ಹಿನ್ನೆಲೆ, ಇಂದು ಬೆಳಗ್ಗೆ ನಗರದಲ್ಲಿ ಧಾರಾಕಾರವಾಗಿ ಮಳೆ ಬಿದ್ದಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಬ್ಯಾರಿಕೇಡ್ಗಳನ್ನು ನಿರ್ಮಿಸಿದ್ದ ಪೊಲೀಸರು,ಒಂದು ಬ್ಯಾರಿಕೇಡ್ ನಿಂದ ಮತ್ತೊಂದು ಬ್ಯಾರಿಕೇಡ್ಗೆ ಹಗ್ಗವನ್ನು ಕಟ್ಟಿ ವಾಹನಗಳನ್ನು ತಡೆಹಿಡಿದ್ದರು. ಆದರೆ ಹಲವು ವಾಹನಗಳ ಮಧ್ಯೆ ಇದ್ದ ಅಂಬುಲನ್ಸ್ನ್ನು ಅಲ್ಲಿಯೇ ಪಕ್ಕದಲ್ಲಿ ಸಂಚರಿಸುತ್ತಿದ್ದ ಮಾಜಿ ಸೈನಿಕರೋರ್ವರು ಹಗ್ಗವನ್ನು ತೆರವುಗೊಳಿಸುವ ಮೂಲಕ ಸೇವೆಗೆ ಅನುಮಾಡಿಕೊಟ್ಟಿದ್ದರು. ಆಗ ಪೊಲೀಸರ ನಿಯಮವನ್ನು ಗಾಳಿಗೆ ತೂರಿ ಹಗ್ಗ ಬಿಚ್ಚಿದ್ದಾರೆ ಎಂಬ ಕಾರಣದಿಂದ ಮಾಜಿ ಸೈನಿಕ ನಾಗಪ್ಪ ಅವರನ್ನು ಎಸ್ಐ ಗಂಗಪ್ಪ ಅವರು ಮನಸೋ ಇಚ್ಛೆಯಿಂದ ನಿಂದಿಸಿ ಥಳಿಸಿದ್ದರು.