ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಹಿಮಪಾತದಿಂದ ಮೃತಪಟ್ಟ 9 ಯೋಧರ ಶವಗಳನ್ನು ಬೇಸ್ ಕ್ಯಾಂಪ್ ಲೆಹ್ಗೆ ರವಾನಿಸಲಾಗಿದೆ. ಮೈಸೂರು ಹೆಚ್.ಡಿಕೋಟೆ ಯೋಧ ಮಹೇಶ್, ಹಾಸನದ ಯೋಧ ನಾಗೇಶ್ ಅವರ ದೇಹಗಳು ಕೂಡ ಇವುಗಳಲ್ಲಿ ಸೇರಿದೆ. ನಾಳೆ ಬೆಳಿಗ್ಗೆ ಇವರ ದೇಹಗಳನ್ನು ದೆಹಲಿಗೆ ರವಾನಿಸಲಾಗುತ್ತದೆ. ಸಿಯಾಚಿನ್ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನದ ಕಾರಣದಿಂದ ಮೃತದೇಹಗಳನ್ನು ತೆಗೆಯಲು ವಿಳಂಬವಾಗಿತ್ತು.
ಲ್ಯಾನ್ಸ್ ನಾಯಕ್ ಹನುಮಂತಪ್ಪ ಅವರು ಹಿಮಪಾತದಲ್ಲಿ 6 ದಿನಗಳು ಹೂತುಹೋಗಿದ್ದರೂ ಬದುಕುಳಿದು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ತೀವ್ರ ಅಂಗಾಂಗ ವೈಫಲ್ಯದಿಂದ ಅವರು ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಯನ್ನು ಸಕಲ ಗೌರವದೊಂದಿಗೆ ನೆರವೇರಿಸಲಾಯಿತು.