ಕೇಂದ್ರದ ವಿರುದ್ಧ ರಾಜ್ಯಸರ್ಕಾರದ ಆರೋಪ ಸರಿಯಲ್ಲ. ಮಾತುಕತೆಯ ವೇಳೆ ಸಿಎಂ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ. ಇದನ್ನು ಬಿಟ್ಟು ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಆರೋಪ ಮಾಡುವುದು ಸರಿಯಲ್ಲ ಎಂದು ಕೇಂದ್ರ ಕಾನೂನು ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಅವರು ಹೇಳಿದ್ದಾರೆ. ಕೇಂದ್ರ ಕರೆದ ಸಭೆಗೆ ಅವರು ಬರುವುದಿಲ್ಲ. ನಾವೇ ಮುಂದೆ ನಿಂತು ಮಾತನಾಡಬೇಕು. ಆದರೆ ಒಂದು ಪತ್ರವನ್ನು ಮುಂದಿಟ್ಟುಕೊಂಡು ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.