ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಆರೋಪ ಸರಿಯಲ್ಲ: ಸದಾನಂದ ಗೌಡ

ಭಾನುವಾರ, 31 ಜನವರಿ 2016 (10:35 IST)
ಉಮಾಭಾರತಿ ಮತ್ತು ಗೋವಾ ಸಿಎಂ ಬರೆದ ಪತ್ರದ ವಿಚಾರವಾಗಿ ಸಿದ್ದರಾಮಯ್ಯ ಅವರ ಆರೋಪದ ವಿರುದ್ಧ ಕೇಂದ್ರ ಕಾನೂನು ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಬೆಂಗಳೂರಿನಲ್ಲಿ ವಾಗ್ದಾಳಿ ಮಾಡಿದ್ದಾರೆ.

ಕೇಂದ್ರದ ವಿರುದ್ಧ ರಾಜ್ಯಸರ್ಕಾರದ ಆರೋಪ ಸರಿಯಲ್ಲ. ಮಾತುಕತೆಯ ವೇಳೆ ಸಿಎಂ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ. ಇದನ್ನು ಬಿಟ್ಟು ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಆರೋಪ ಮಾಡುವುದು ಸರಿಯಲ್ಲ ಎಂದು ಕೇಂದ್ರ ಕಾನೂನು ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಅವರು ಹೇಳಿದ್ದಾರೆ. ಕೇಂದ್ರ ಕರೆದ ಸಭೆಗೆ ಅವರು ಬರುವುದಿಲ್ಲ. ನಾವೇ ಮುಂದೆ ನಿಂತು ಮಾತನಾಡಬೇಕು. ಆದರೆ ಒಂದು ಪತ್ರವನ್ನು ಮುಂದಿಟ್ಟುಕೊಂಡು ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಮೊದಲು ಗೋವಾ ಸಿಎಂ ಜತೆ ಸಿದ್ದರಾಮಯ್ಯ ಚರ್ಚಿಸಲಿ.  ಆಗ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ, ರಾಜ್ಯದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸಿಎಂ ಮಾತನಾಡಬೇಕು. ಇದನ್ನು ಬಿಟ್ಟು ಸುಮ್ಮನೇ ಆರೋಪ ಮಾಡುವುದು ಸರಿಯಲ್ಲ  ಎಂದು ಸದಾನಂದ ಗೌಡ ಹೇಳಿದರು.

ವೆಬ್ದುನಿಯಾವನ್ನು ಓದಿ