ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜೀನಾಮೆ ವಿಷಯ ನನ್ನ ಕಿವಿಗೆ ಬಿದ್ದಿದೆ. ಆದರೆ ನಾನು ಯಾವುದೇ ರೀತಿಯಾಗಿಯೂ ಮಧ್ಯ ಪ್ರವೇಶಿಸುವುದಿಲ್ಲ. ಏಕೆಂದರೆ ಸಿಎಂ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೋಳಿ ಅವರ ಸಂಬಂಧ ತುಂಬಾ ಉತ್ತಮವಾಗಿದ್ದು, ತಲೆದೋರಿರುವ ಸಮಸ್ಯೆಯನ್ನು ಅವರೇ ಬಗೆಹರಿಸಲಿದ್ದಾರೆ. ಜಾರಕಿಹೋಳಿ ಅವರನ್ನು ಮನವೊಲಿಸಿ ಮುಂದುವರಿಯವಂತೆ ಮಾಡುತ್ತಾರೆ. ಹಾಗಾಗಿ ನಾನು ಮಧ್ಯ ಪ್ರವೇಶಿಸುವುದಿಲ್ಲ ಎಂದಿದ್ದಾರೆ.