ಮೊದ್ಲು ಸಿಎಂಗೆ ಧೈರ್ಯವಿತ್ತು ಈಗ ಏನಾಗಿದೆಃ ಜನಾರ್ಧನ ಪೂಜಾರಿ

ಶನಿವಾರ, 6 ಫೆಬ್ರವರಿ 2016 (14:52 IST)
ಮೊದ್ಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧೈರ್ಯವಿತ್ತು ಈಗ ಏನಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ್ ಪೂಜಾರಿ ಪ್ರಶ್ನಿಸಿದ್ದಾರೆ.
 
ನಗರದಲ್ಲಿ ಆಯೋಜಿಸಲಾದ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಜನಾರ್ಧನ್ ಪೂಜಾರಿ ಮಾತನಾಡುತ್ತಿದ್ದರು. 
 
ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ನಿಮ್ಮ ಜೊತೆಗಿದ್ದಾರೆ. ನೀವೇ ನಿರ್ಧಾರ ತೆಗೆದುಕೊಳ್ಳಿ. ಅದಕ್ಷ ಸಚಿವರನ್ನು ಕೈಬಿಟ್ಟು ಜನಪರ ಕಾಳಜಿಯಿರುವ ಸಚಿವರಿಗೆ ಪ್ರೊತ್ಸಾಹ ನೀಡಿ ಎಂದರು. 
 
ಕಾರ್ಯಕರ್ತರನ್ನು ಕಡೆಗೆಣಿಸುವ ಸಚಿವರನ್ನು ಸಂಪುಟದಿಂದ ಕೈ ಬಿಟ್ಟು ದಕ್ಷರಿಗೆ ಸಚಿವ ಸ್ಥಾನ ನೀಡಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
 
ಜನಾರ್ಧನ್ ಪೂಜಾರಿ ಅವರ ಮಾತಿನಿಂತ ಮುಜುಗರಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತ್ತ ಕೈ ತೋರಿಸಿ ಮೌನವಾಗಿರುವಂತೆ ಸಲಹೆ ನೀಡಿದರು ಎನ್ನಲಾಗಿದೆ.  

ವೆಬ್ದುನಿಯಾವನ್ನು ಓದಿ