ಸಿದ್ಧತೆ, ಬದ್ಧತೆ ಎರಡೂ ಇದ್ದ ಶಾಸಕ ಜಗದೀಶ್: ಹೊಗಳಿದ ಸಿದ್ದರಾಮಯ್ಯ

ಮಂಗಳವಾರ, 24 ನವೆಂಬರ್ 2015 (17:49 IST)
ನಿನ್ನೆ ಹೃದಯಾಘಾತದಿಂದ ನಿಧನರಾದ ಜಗದೀಶ್ ಕುಮಾರ್ ಅವರ ಗೌರವಾರ್ಥ ಇಂದು ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಸದನದಲ್ಲಿ ಸಿದ್ಧತೆ ಮತ್ತು ಬದ್ಧತೆ ಎರಡೂ ಇದ್ದ ಶಾಸಕ ಜಗದೀಶ್. ಆರೋಗ್ಯವನ್ನು ಕಡೆಗಣಿಸುವುದರಿಂದ ಹೀಗೆ ಆಗಬಹುದು. ಸರ್ಕಾರಕ್ಕೂ ಜಗದೀಶ್ ಉತ್ತಮ ಸಲಹೆಗಳನ್ನು ನೀಡುತ್ತಿದ್ದರು ಎಂದು ಸಿಎಂ ಸಿದ್ದರಾಮಯ್ಯ ಜಗದೀಶ್ ಅವರನ್ನು ಹೊಗಳಿದರು.

ವಿಚಾರಗಳು ಕುರಿತು ಅವರು ಆಳವಾಗಿ ಅಧ್ಯಯನ ಮಾಡಿ ಮಾತನಾಡುತ್ತಿದ್ದರು. ಶಾಸಕರ ಸಾವಿನಿಂದ ಪಕ್ಷಕ್ಕೆ, ಸದನಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.  ಸದನದಲ್ಲಿ ಸಂತಾಪ ಸೂಚನೆ ಬಳಿಕ ಸದನವನ್ನು ಮುಂದೂಡಲಾಯಿತು. 
 
 ಜಗದೀಶ್ ಅವರ ಪಾರ್ಥಿವ ಶರೀರಕ್ಕೆ ಹೆಬ್ಬಾಳದ ಚಿತಾಗಾರದಲ್ಲಿ   3 ಸುತ್ತು ಕುಶಾಲತೋಪು ಹಾರಿಸಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಜಗದೀಶ್ ಕುಮಾರ್ ಪಂಚಭೂತಗಳಲ್ಲಿ ಲೀನವಾದರು.   ವಿವಿಧ ರಾಜಕೀಯ ಗಣ್ಯರು ಜಗದೀಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದರು. 

ವೆಬ್ದುನಿಯಾವನ್ನು ಓದಿ