ಪಿ.ಜಿ.ಆರ್. ಸಿಂಧ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ: ಡಿ.ಕೆ.ಶಿವಕುಮಾರ್

ಶನಿವಾರ, 6 ಫೆಬ್ರವರಿ 2016 (18:11 IST)
ಹಿರಿಯ ಜೆಡಿಎಸ್ ನಾಯಕ ಪಿ.ಜಿ.ಆರ್ .ಸಿಂಧ್ಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
 
ಸಿಂಧ್ಯಾ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸುತ್ತಿದ್ದಾರೆ. ಈ ಹಿಂದೆ ಜಮೀರ್ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದರು ಇದೀಗ ಪಿ.ಜಿ.ಆರ್ ಸಿಂಧ್ಯ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
 
ನಾನು ಯಾವತ್ತೂ ರಾಜಕೀಯ ನಿವೃತ್ತಿ ಪಡೆಯೋಲ್ಲ. ನಾನು ಕೊನೆವರೆಗೆ ಹೋರಾಡುತ್ತೇನೆ. ಯುದ್ಧಭೂಮಿಯಲ್ಲಿಯೇ ಸಾಯುತ್ತೇನೆ. ಸಾಯುವವರೆಗೆ ರಾಜಕೀಯದಲ್ಲಿರುತ್ತೇನೆ. ವಿರೋಧಿಗಳು ರಾಜಕೀಯ ನಿವೃತ್ತಿ ಪಡೆಯಬಾರದು ಎಂದು ಹೇಳುವುದಾಗಿ ಕುಮಾರಸ್ವಾಮಿಗೆ ಟಾಂಗ್ ನೀಡಿದರು.
 
ರಾಮನಗರ ಮತ್ತು ಕನಕಪುರದಲ್ಲಿ ಸಿಂಧ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. ಮತದಾರರಿಗೆ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವಂತೆ ಕೋರುತ್ತಿದ್ದಾರೆ ಎಂದರು 

ವೆಬ್ದುನಿಯಾವನ್ನು ಓದಿ