ಅರುಣ್ ತನ್ನ ತಂದೆಯನ್ನು ಕೊಲ್ಲಲು ಮುಖ್ಯ ಕಾರಣ ಸೇಡು. ಅದು ಸುಮಾರು 18 ವರ್ಷಗಳ ಹಿಂದಿನ ಸೇಡು. ತಂದೆ ಶರಣಬಸಪ್ಪ ತನ್ನ ಪತ್ನಿ, ಅರುಣ್ ತಾಯಿಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿದ್ದರಿಂದ ಅರುಣ್ ತಾಯಿ ಸತ್ತಿದ್ದರು. ಶರಣಬಸಪ್ಪ 7 ವರ್ಷ ಜೈಲುವಾಸ ಕೂಡ ಅನುಭವಿಸಿದ್ದರು. ಜೈಲಿನಿಂದ ಬಂದ ಬಳಿಕ ಅವರು ಪ್ರತ್ಯೇಕವಾಗಿ ವಾಸವಾಗಿದ್ದು, ಅರುಣ್ ಸಂಬಂಧಿಕರ ಮನೆಯಲ್ಲಿ ವಾಸವಿದ್ದ.