ನೌಕರಿ ಸಿಗಲು ಕಾರಣವಾಗಿದ್ದ ತಾಯಿಯನ್ನು ಮನೆಯಿಂದ ಹೊರಹಾಕಿದ ಪುತ್ರ

ಮಂಗಳವಾರ, 2 ಫೆಬ್ರವರಿ 2016 (13:26 IST)
ತನಗೆ ನೌಕರಿ ಸಿಗಲು ಕಾರಣವಾಗಿದ್ದ ತಾಯಿಯನ್ನೇ ಮನೆಯಿಂದ ಪುತ್ರ ಹೊರಹಾಕಿದ ಹೃದಯವಿದ್ರಾವಕ ಘಟನೆ ನಡೆದಿದೆ. ಕೆಪಿಟಿಸಿಎಲ್ ನೌಕರ ಅಪಘಾತದಲ್ಲಿ ಮೃತಪಟ್ಟಿದ್ದ. ಮೃತ ನಿಜಗುಣಾರಾಧ್ಯರ ನೌಕರಿ ಪತ್ನಿ ಶ್ಯಾಮಲಾಗೆ ಅನುಕಂಪದ ಆಧಾರದ ಮೇಲೆ  ಸಿಗಬೇಕಿತ್ತು.

ಆದರೆ ಮಗ ತನಗೆ ನೌಕರಿಯನ್ನು ಬಿಟ್ಟುಕೊಡುವಂತೆ ಅಂಗಲಾಚಿದ್ದರಿಂದ ಶ್ಯಾಮಲಾ ಮಗನಿಗೆ ನೌಕರಿ ಬಿಟ್ಟುಕೊಟ್ಟಿದ್ದರು. ಆದರೆ ಮಗ ನೌಕರಿಯನ್ನು ಕಾಡಿಬೇಡಿ ಪಡೆದು ಸೀನಿಯರ್ ಅಸಿಸ್ಟೆಂಟ್ ಹುದ್ದೆ ಅಲಂಕರಿಸಿದ.

ಆದರೆ ಮದುವೆಯಾದ ಮೇಲೆ ವರಸೆ ಬದಲಿಸಿ ಹಣ, ಒಡವೆಗಾಗಿ ತಾಯಿಯನ್ನು ಹೊಡೆಯಲಾರಂಭಿಸಿದ. ಬಳಿಕ ತಾಯಿಯನ್ನು ಮನೆಯಿಂದ ಹೊರಗೆಹಾಕಿ ಅಮಾನವೀಯತೆ ತೋರಿದ.

ವೆಬ್ದುನಿಯಾವನ್ನು ಓದಿ