‘ಗ್ರಾಮದಲ್ಲಿ ಜನರು ಹಕ್ಕುಪತ್ರ ನೀಡಲು ಬಂದೂಕು ತೋರಿಸಬೇಕಾ? ಜನರನ್ನು ನಕ್ಸಲೈಟ್ರತ್ತ ತಳ್ಳಬೇಡಿ’ ಎಂದು ಗರಂ ಆಗಿ ನುಡಿದ ಅವರು, ‘ಕಾನೂನುಗಳೇಕೆ? ಅಧಿಕಾರಿಗಳಿಗೆ ಚೆಂದ ನೋಡಲಾ? ಅಧಿಕಾರಿಗಳನ್ನು ಕರೆಯಿಸಿ. ಒಂಟಿ ಕಾಲಿನಲ್ಲಿ ನಿಲ್ಲಿಸಿ. ಕೆಲಸ ತೆಗೆಯಿರಿ’ ಎಂದು ವಾಗ್ದಾಳಿ ನಡೆಸಿದರು.
ಇದಕ್ಕೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಯೊಂದಕ್ಕೆ ಉತ್ತರಿಸಿದ ಅವರು, ‘ಉಪಚುನಾವಣೆ ಗೆಲುವು ಆಡಳಿತ ಪಕ್ಷಕ್ಕೆ ಕಿರೀಟ ಇಟ್ಟಿದೆ. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಆದರೆ, ಜನರ ಕ್ಷೇಮಾಭಿವೃದ್ಧಿ ದೃಷ್ಟಿಯಿಂದ ಸರ್ಕಾರವನ್ನು ಎಚ್ಚರಿಸಿದ್ದೇನೆ. ಸಚಿವ ಸಂಪುಟ ರಚನೆ ಮುಖ್ಯಮಂತ್ರಿ ಅವರ ಪರಮಾಧಿಕಾರ’ ಎಂದರು.