ಭ್ರಷ್ಟ, ಅನೈತಿಕ ರಾಜಕೀಯದ ರೂಪ ಡಿ.ಕೆ. ಶಿವಕುಮಾರ್. ಇಂಧನ ಸಚಿವರ ಅಕ್ರಮಗಳ ಬಗ್ಗೆ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪಿಸುವಂತೆ ಒತ್ತಾಯಿಸಿ ಅಭಿಯಾನ ಮಾಡುವುದಾಗಿ ಸಮಾಜ ಪರಿವರ್ತನೆ ಸಂಘಟನೆಯ ಅಧ್ಯಕ್ಷ ಎಸ್.ಆರ್. ಹಿರೇಮಠ್ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.
18 ವರ್ಷಗಳು ವಿಚಾರಣೆ ನಡೆದು ಜಯಲಲಿತಾ ಸಿಎಂ ಕುರ್ಚಿಯಿಂದ ಕೆಳಕ್ಕಿಳಿದು ಪರಪ್ಪನ ಅಗ್ರಹಾರ ಸೇರಿದರು. ಲಕ್ಷಾನುಗಟ್ಟಲೆ ಅಕ್ರಮಗಳ ಸಂಪಾದನೆಯನ್ನು ಡಿಕೆಶಿ ಮಾಡಿದ್ದಾರೆ. ಮೊದಲ ಹೆಜ್ಜೆಯಾಗಿ ಹೊಸದಾಗಿ ಬಂದ ಪ್ರಧಾನಮಂತ್ರಿಗಳಿಗೆ, ಸೋನಿಯಾಗಾಂಧಿಗೆ, ರಾಜ್ಯಪಾಲರಿಗೆ ವಿಶೇಷ ಕೋರ್ಟ್ ಸ್ಥಾಪಿಸುವಂತೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.