ಶ್ರೀರಾಮುಲು ನಮಗೆ ರಾಜಕೀಯವಾಗಿ ಆಧಾರ ಸ್ಥಂಭ: ಸೋಮಶೇಖರ್ ರೆಡ್ಡಿ

ಬುಧವಾರ, 1 ಮಾರ್ಚ್ 2017 (19:39 IST)
ಹಿರಿಯ ನಾಯಕರಾದ ಶ್ರೀರಾಮುಲು ನಮಗೆ ರಾಜಕೀಯವಾಗಿ ಆಧಾರ ಸ್ಥಂಭವಾಗಿರುವುದರಿಂದ ಅವರ ವಿರುದ್ಧ ದೂರು ನೀಡುವುದು ಸರಿಯಲ್ಲ ಎಂದು ಮಾಜಿ ಸಚಿವ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
 
ಕರುಣಾಕರ್ ರೆಡ್ಡಿ ಮತ್ತು ಶ್ರೀರಾಮುಲು ಮಧ್ಯೆ ಸಂಧಾನ ಏರ್ಪಡಿಸಲು ಯತ್ನಿಸುತ್ತೇನೆ. ಜಾತಿ ನಿಂದನೆ ಕೇಸ್ ಹಾಕಿದವರೊಂದಿಗೆ ಮಾತನಾಡಿ ಕೇಸ್ ಹಿಂಪಡೆಯಲು ಮನವೊಲಿಸುತ್ತೇನೆ ಎಂದು ತಿಳಿಸಿದ್ದಾರೆ.
 
ಆರಂಭದಿಂದಲೂ ಪರಸ್ಪರ ವಿರೋಧವಾಗಿರುವ ಕರುಣಾಕರ್ ರೆಡ್ಡಿ ಮತ್ತು ಶ್ರೀರಾಮುಲು ಮಧ್ಯೆ, ವೈಮನಸ್ಸು ಬೂದಿ ಮುಚ್ಚಿದ ಕೆಂಡದಂತಿತ್ತು. ಇದೀಗ ವೈಮನಸ್ಸು ಬಹಿರಂಗವಾಗಿದೆ ಎನ್ನಲಾಗಿದೆ,

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ