ರಾಜ್ಯದಲ್ಲಿ ಮುಂದಿನ ಸಂಕ್ರಾಂತಿವರೆಗೆ ರಾಜಕೀಯ ಅಸ್ಥಿರತೆ ಇರಲಿದೆ. ಅಧಿಕಾರ ತ್ಯಾಗವೂ ನಡೆಯಬಹುದು. ಆದರೆ ಇದನ್ನು ತಿದ್ದಿಕೊಳ್ಳಲು ಅವಕಾಶವಿದೆ. ರಾಜ್ಯಾಂಗ, ಕಾರ್ಯಾಂಗ ಇಲ್ಲವೇ ನ್ಯಾಯಾಂಗ ಕ್ಷೇತ್ರದ ರಾಷ್ಟ್ರದ ಗಣ್ಯರು, ಮಹಾನ್ ವ್ಯಕ್ತಿಗಳಿಗೆ ಆಪತ್ತು ಕಾದಿದೆ ಎಂದು ಹಾರ್ನಳ್ಳಿ ಕೋಡಿ ಸಂಸ್ಥಾನಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುತ್ತು ಉದರ್ಯಾವ, ಮೂಗುತಿ ಭಾರವಾದೀತು ಎಂದು ಮುಂದಿನ ವರ್ಷದ ಮಳೆ- ಬೆಳೆಯ ಭವಿಷ್ಯ ನುಡಿದರು. ಮುತ್ತು ಉದರ್ಯಾವ ಅಂದ್ರೆ ಮಳೆ ಹೆಚ್ಚಾಗುತ್ತದೆ. ಮೂಗುತಿ ಭಾರ ಆದೀತು ಎಂದರೆ ಮಳೆಯಿಂದ ಸಮಸ್ಯೆ ಉಂಟಾಗುತ್ತದೆ ಎಂದು ವಿಶ್ಲೇಷಿಸಿದರು.