ಅಕ್ರಮ ಭೂ ಮಂಜೂರಾತಿ ಕೇಸ್‌ಗೆ ತಡೆಯಾಜ್ಞೆ: ಶೆಟ್ಟರ್ ರಿಲೀಫ್

ಶುಕ್ರವಾರ, 21 ನವೆಂಬರ್ 2014 (15:43 IST)
ಅಕ್ರಮ ಭೂಮಂಜೂರಾತಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್  ವಿರುದ್ಧ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಶೆಟ್ಟರ್ ನಿಟ್ಟುಸಿರು ಬಿಟ್ಟಿದ್ದಾರೆ. . ಸಿಎಂ ಆಗಿದ್ದಾಗ ಶೆಟ್ಟರ್ ಸ್ವಾತಂತ್ರ್ಯ ಹೋರಾಟಗಾರನ ಪುತ್ರ ಸುಂದರೇಶನ್ ಎಂಬವರಿಗೆ ಶ್ರೀಗಂಧ ಕಾವಲಿನಲ್ಲಿ 4 ಎಕರೆ  ಭೂಮಿ ಮಂಜೂರು ಮಾಡಿದ್ದರು.

ಒಕ್ಕಲಿಗರ ಸಂಘದ ಸಂಚಾಲಕ ಎ.ಪ್ರಸಾದ್‌ ಅವರು ಶೆಟ್ಟರ್ ಅಕ್ರಮವಾಗಿ ಭೂಮಿ ಮಂಜೂರು ಮಾಡಿದ್ದಾರೆಂದು ನೀಡಿದ ದೂರಿನ ಮೇರೆಗೆ ಶೆಟ್ಟರ್‌  ವಿರುದ್ಧ  ಬಿಎಂಟಿಎಫ್ ಪ್ರಕರಣ ದಾಖಲು ಮಾಡಿಕೊಂಡಿತ್ತು.

  ಬಿಎಂಟಿಎಫ್ ಕೇಸ್ ಪ್ರಶ್ನಿಸಿ ಶೆಟ್ಟರ್ ಅರ್ಜಿ ಸಲ್ಲಿಸಿದ್ದರಿಂದ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮುಂದಿನ ಆದೇಶದವರೆಗೆ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಶೆಟ್ಟರ್ ಅವರಿಗೆ ಕೊಂಚ ರಿಲೀಫ್ ಸಿಕ್ಕಿದೆ. 

ವೆಬ್ದುನಿಯಾವನ್ನು ಓದಿ