ಬೆಂಗಳೂರು ರಾಜಕಾಲುವೆಯಲ್ಲಿ ಕೊಚ್ಚಿಹೋದ 9ನೇ ತರಗತಿ ವಿದ್ಯಾರ್ಥಿ

ಬುಧವಾರ, 7 ಅಕ್ಟೋಬರ್ 2015 (19:44 IST)
ಬೆಂಗಳೂರು ರಾಜಕಾಲುವೆಯಲ್ಲಿ 9 ನೇ ತರಗತಿ ವಿದ್ಯಾರ್ಥಿ ಕೊಚ್ಚಿಹೋಗಿರುವ ಪ್ರಸಂಗ ವರದಿಯಾಗಿದೆ.  ಬಾಲಕ ಪ್ರಕಾಶ್ ದಾಸರಹಳ್ಳಿ ಕೆರೆ ಕೋಡಿಯಲ್ಲಿ ಆಟವಾಡಲು ತೆರಳಿದ್ದಾಗ ವೀರಣ್ಣನ ಪಾಳ್ಯದ ಬಳಿಯ ರಾಜಕಾಲುವೆ ಬಳಿ  ಕೊಚ್ಚಿ ಹೋದ ದುರ್ಘಟನೆ ಸಂಭವಿಸಿದೆ.  ಸಂಜೆ 4.15ರ ವೇಳೆಗೆ ಮೂವರು ಹುಡುಗರು ರಾಜಕಾಲುವೆಗೆ ಹೋಗಿದ್ದರು.

ಈ ಬಾಲಕ ಸುಲ್ತಾನ್ ಪಾಳ್ಯಕ್ಕೆ ಸೇರಿದ್ದು, ಮಾನ್ಯತಾ ಟೆಕ್ ಪಾರ್ಕ್ ಹಿಂಭಾಗದ ರಾಜಕಾಲುವೆ ಬಳಿ ಆಟವಾಡಲು ಬಂದಿದ್ದಾಗ ಮಳೆಯ ನೀರಿನಿಂದ ತುಂಬಿ ಹರಿಯುತ್ತಿದ್ದ ರಾಜಕಾಲುವೆಗೆ ಆಕಸ್ಮಿಕವಾಗಿ ಬಿದ್ದು ಕೊಚ್ಚಿಹೋಗಿದ್ದಾನೆ. 
  ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ರಾತ್ರಿ ಆಗಿರುವ ಹಿನ್ನೆಲೆಯಲ್ಲಿ  ಶೋಧಕಾರ್ಯಕ್ಕೆ ಅಡಚಣೆಯಾಗಿದೆ.  ಸಂಪಿಗೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 
 

ವೆಬ್ದುನಿಯಾವನ್ನು ಓದಿ