ವಿದ್ಯಾರ್ಥಿನಿಯನ್ನು ಕೊಂದು ಬಾವಿಗೆಸೆದರು

ಗುರುವಾರ, 18 ಫೆಬ್ರವರಿ 2016 (09:32 IST)
ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿ ಬಾವಿಗೆ ಎಸೆದ ಕರಾಳ ಘಟನೆ ಶೃ೦ಗೇರಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.
 
ಮೃತಳನ್ನು ನಗರದ ಜೆಸಿಬಿಎ೦ ಕಾಲೇಜಿನಲ್ಲಿ ಪ್ರಥಮ ಬಿಕಾ೦ ಓದುತ್ತಿದ್ದ ಸ್ವಾತಿ ಎಂದು ಗುರುತಿಸಲಾಗಿದೆ.
 
ಮ೦ಗಳವಾರ ಮಧ್ಯಾಹ್ನ ಕಾಲೇಜು ಮುಗಿಸಿಕೊಂಡು ತನ್ನ ಗ್ರಾಮ ವೈಕು೦ಠಪುರಕ್ಕೆ ಹೋಗುತ್ತಿದ್ದ ಸ್ವಾತಿಯನ್ನು ತಡೆದ ಹೊಸಕೇರಿ ಕಾಲನಿ ನಿವಾಸಿಗಳಾದ ಪ್ರದೀಪ್ (27) ಮತ್ತು ಸ೦ತೋಷ (25)  ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ಆರೋಪಿಗಳು ಮದ್ಯ ಸೇವಿಸಿದ್ದರು. 
 
ಯುವತಿ ಜೋರಾಗಿ ಕಿರುಚಿಕೊಂಡಾಗ ತಮ್ಮ ಕೃತ್ಯ ಬಯಲಾಗುವುದೆಂಬ ಭಯಕ್ಕೊಳಗಾದ ಆರೋಪಿಗಳು 
ಆಕೆಯನ್ನು ಹತ್ಯೆ ಮಾಡಿ ಹೊಸತೋಟ ಸಮೀಪ ಪಾಳು ಬಾವಿಗೆ ಎಸೆದಿದ್ದಾರೆ. 
 
ಯುವತಿಯ ಶವವನ್ನು ನೋಡಿದ ಸ್ಥಳೀಯರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯುವತಿಯ ತಂದೆ ತ್ಯಾಗರಾಜ ಭಟ್ ಶವ ತನ್ನ ಮಗಳದೆಂದು ಗುರುತಿಸಿದ್ದಾರೆ. 
 
ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ